Thursday, September 26, 2013

ಪ್ರಕೃತಿ

ಹುಣ್ಣಿಮೆ ಬೆಳಕು
ಅಮಾವಾಸ್ಯ ಕತ್ತಲು
------------
ಮರದ ತುದಿಯಲ್ಲಿ ಗೂಡು
ಗಗನದ ಸಮೀಪ
ಹಾರುವ ಒಂದು ಪ್ರತ್ಯೇಕ ಆನಂದ
ಕಣ್ಣ ನೋಟ ತೀಕ್ಷ್ಣ
ಆದರೆ ಕೆಳಗಿನವರು ಕಂಡು ಬರುವುದಿಲ್ಲ
ಬಿದ್ದಾಗ ಉಸಿರಿಲ್ಲ
--------------
ಪ್ರಕೃತಿಯ ತನ್ನದೇ ನಿಯಮ
ಬಿಸಿಲು,ಗಾಳಿ, ಮಳೆ
ಆದರೆ ಎಲ್ಲರ ಪ್ರತ್ಯೇಕ ಅನುಭವ
ಕೆಲವರ ಭೂಮಿ ಬಂಜರು
ಕೆಲವರ ಭೂಮಿ ಫಲಿತ
--------------
ಪೂರ್ಣ ಚಂದ್ರ ಅಂದರೆ
ಕರಗಲು ಸಿದ್ಧ
-------------
ಸೂರ್ಯನ ಪ್ರತಾಪ
ಸಂಜೆ ತನಕ
ಮುಳುಗುವುದು ನಿಶ್ಚಿತ
------------
ಹೂವಿನ
ಅಂದ ಸುಗಂಧ
ಬಾಡುವ ತನಕ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...