Thursday, August 29, 2013

ಕೆಲವು ಚುಟುಕುಗಳು

ವಾದ ವಿವಾದ 
__________
ಯಾರೋ ಆ ಮರಕ್ಕೆ 
ಕಲ್ಲು ಎಸೆದರು 
ಮರದಲ್ಲಿ ಕುಳಿತ 
ಅನೇಕ ಪಕ್ಷಿಗಳು
ಒಮ್ಮೆಲೇ 
ಕರ್ಕಶವಾಗಿ ಕೂಗಲಾರಂಭಿಸಿದವು.
by ಹರೀಶ್ ಶೆಟ್ಟಿ,ಶಿರ್ವ
*********

ಮನೆಯಲ್ಲಿ ಪತ್ನಿಗೆ 
ಹೊಡೆದು ಹೊರಟವ 
ಆ ಮಂಚದಲಿ 
ನಾರಿ ಶಕ್ತಿಯ 
ಕುರಿತು 
ಭಾಷಣ ಕೊಡುತ್ತಿದ್ದ. 
by ಹರೀಶ್ ಶೆಟ್ಟಿ,ಶಿರ್ವ
**********

ಕೃಷ್ಣ 
ನಿನ್ನ ಕೊಳಲು 
ನೀಡುವ
ನಾದದಲಿ
ಒಂದೇ ನಾದ 
ಉತ್ಕೃಷ್ಟ 
"ರಾಧೆ" ಎನ್ನುವ ನಾದ 
by ಹರೀಶ್ ಶೆಟ್ಟಿ,ಶಿರ್ವ

**********

ಮಾನವ ಸ್ವಭಾವ 
___________
ಎಷ್ಟು
ವಿಚಿತ್ರ ಅಲ್ಲವೆ 
ಮಾನವ ಸ್ವಭಾವ 
ನನ್ನ ಅರ್ಧ ಲೋಟೆ ತುಂಬಿದೆ 
ನಿನ್ನ ಅರ್ಧ ಲೋಟೆ ಖಾಲಿ 
by ಹರೀಶ್ ಶೆಟ್ಟಿ ,ಶಿರ್ವ

**********


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...