Saturday, August 31, 2013

ಭಗ್ನ ಪ್ರೇಮಿ

ಗೆಳತಿ...  
ನಾನು 
ಬರೆಯುವ ಕವನಗಳಿಂದ 
ಈಗ 
ನನ್ನ ಸುತ್ತ ಮುತ್ತ 
ಇದ್ದ ಜನರಿಗೂ 
ತಿಳಿದಿದೆ 
ನಾನೊಬ್ಬ 
ಭಗ್ನ ಪ್ರೇಮಿಯೆಂದು   
by ಹರೀಶ್ ಶೆಟ್ಟಿ,ಶಿರ್ವ

Thursday, August 29, 2013

ಪ್ರೀತಿ-ಅಗಲಿಕೆ

ಗೆಳತಿ 
ನೀನು ನನ್ನನ್ನು 
ಇಷ್ಟ ಪಡುವುದಿಲ್ಲವೆಂದು 
ಗೊತ್ತಿದ್ದರೂ 
ಅದೇಕೆ 
ನಾನು ಪ್ರತಿದಿನ 
ನಿನ್ನ 
ದರ್ಶನಕ್ಕಾಗಿ 
ಹಂಬಲಿಸುತ್ತಿರುವೆ ?
by ಹರೀಶ್ ಶೆಟಿ,ಶಿರ್ವ

***********
ಗೆಳತಿ 
ದುಃಖಿಸಬೇಡ 
ಇಷ್ಟು ವರುಷದ 
ನಂತರ
ನನ್ನನ್ನು ಕಂಡು 
ಶರೀರ ಕೃಶವಾಗಿದೆ ಅಷ್ಟೇ 
ಆದರೆ ನಿನ್ನ ವಿನಃ 
ಜೀವಿಸುವೆ ಎಂದು 
ನಿನಗೆ ಕೊಟ್ಟ ಮಾತನ್ನು ಉಳಿಸಿದೆ ಅಲ್ಲವೇ
by ಹರೀಶ್ ಶೆಟ್ಟಿ, ಶಿರ್ವ
************
ಗೆಳತಿ 
ಕಲ್ಲಲ್ಲ 
ಈ ಹೃದಯ 
ಇದಕ್ಕೂ 
ನೋವಾಗುತ್ತದೆ ಕೆಲವೊಮ್ಮೆ 
ಈ ಬರಡು ಕಣ್ಣಲ್ಲಿ ಸಹ
ಕಣ್ಣೀರು 
ತುಂಬಿ ಬರುತ್ತದೆ ಕೆಲವೊಮ್ಮೆ 
by ಹರೀಶ್ ಶೆಟ್ಟಿ, ಶಿರ್ವ

ಕೆಲವು ಚುಟುಕುಗಳು

ವಾದ ವಿವಾದ 
__________
ಯಾರೋ ಆ ಮರಕ್ಕೆ 
ಕಲ್ಲು ಎಸೆದರು 
ಮರದಲ್ಲಿ ಕುಳಿತ 
ಅನೇಕ ಪಕ್ಷಿಗಳು
ಒಮ್ಮೆಲೇ 
ಕರ್ಕಶವಾಗಿ ಕೂಗಲಾರಂಭಿಸಿದವು.
by ಹರೀಶ್ ಶೆಟ್ಟಿ,ಶಿರ್ವ
*********

ಮನೆಯಲ್ಲಿ ಪತ್ನಿಗೆ 
ಹೊಡೆದು ಹೊರಟವ 
ಆ ಮಂಚದಲಿ 
ನಾರಿ ಶಕ್ತಿಯ 
ಕುರಿತು 
ಭಾಷಣ ಕೊಡುತ್ತಿದ್ದ. 
by ಹರೀಶ್ ಶೆಟ್ಟಿ,ಶಿರ್ವ
**********

ಕೃಷ್ಣ 
ನಿನ್ನ ಕೊಳಲು 
ನೀಡುವ
ನಾದದಲಿ
ಒಂದೇ ನಾದ 
ಉತ್ಕೃಷ್ಟ 
"ರಾಧೆ" ಎನ್ನುವ ನಾದ 
by ಹರೀಶ್ ಶೆಟ್ಟಿ,ಶಿರ್ವ

**********

ಮಾನವ ಸ್ವಭಾವ 
___________
ಎಷ್ಟು
ವಿಚಿತ್ರ ಅಲ್ಲವೆ 
ಮಾನವ ಸ್ವಭಾವ 
ನನ್ನ ಅರ್ಧ ಲೋಟೆ ತುಂಬಿದೆ 
ನಿನ್ನ ಅರ್ಧ ಲೋಟೆ ಖಾಲಿ 
by ಹರೀಶ್ ಶೆಟ್ಟಿ ,ಶಿರ್ವ

**********


Wednesday, August 28, 2013

ತುಂಬಾ ತಡವಾಯಿತು ನಂದಲಾಲ

!!ತುಂಬಾ ತಡವಾಯಿತು ನಂದಲಾಲ
ನಿನ್ನನ್ನು ಕಾಯುತ್ತಿದ್ದರೆ ಗೋಪಿಯರು
ಗ್ವಾಲರು ಬಾಲಕರು ಪ್ರತಿಯೊಬ್ಬರಿಂದ ಕೇಳುವರು
ಎಲ್ಲಿದ್ದಾನೆ ನಮ್ಮ ಮುರಳಿ ಮನೋಹರ !!

!!ಯಾರೂ ಹೋಗುವುದಿಲ್ಲ
ಗೋಕುಲದ ಗಲ್ಲಿಯಲಿ
ನಿನ್ನ ವಿನಾಃ ಹೂವನ್ನು ಹೆಕ್ಕಲು
ಹಂಬಲಿಸುತ್ತಿದ್ದಾರೆ ಯಮುನೆ ತಟದಲಿ
ನಿನ್ನ ಮುರಳಿ ವಾದನ ಕೇಳಲು
ಈಗಂತೂ ಮುಖ ತೋರಿಸು ತುಂಟನೇ
ಯಾಕೆ ನಿರ್ಮಿಸುವೆ ಗೊಂದಲ!!
ತುಂಬಾ ತಡವಾಯಿತು ನಂದಲಾಲ....

!!ಸಂಕಟದಲ್ಲಿದೆ ಆ ಧರತಿ
ನೀನು ಜನಿಸಿದ ಭೂಮಿಯಲಿ
ಪೂರ್ಣಗೊಳಿಸು ಇಂದು ಆ ವಚನ
ನೀ ಕೊಟ್ಟಿದ್ದು ಗೀತೆಯಲಿ
ನಿನ್ನ ವಿನಾಃ ಯಾರಿಲ್ಲ ಮೋಹನ
ಈ ಭಾರತದ ರಕ್ಷಕ !!
ತುಂಬಾ ತಡವಾಯಿತು ನಂದಲಾಲ....

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಖಾನ್ ದಾನ್

बड़ी देर भई नंदलाला
तेरी रह तके बृजबाला
ग्वाल-बाल इक-इक से पूछे
कहाँ है मुरली वाला रे
बड़ी देर भई नंदलाला

कोई ना जाए कुञ्ज गलिन में, तुझ बिन कलियाँ चुनने को
तरस रहे हैं जमुना के तट, धुन मुरली की सुनने को
अब तो दरस दिखा दे नटखट, क्यों दुविधा मे डाला रे
बड़ी देर भई नंदलाला...

संकट में है आज वो धरती, जिस पर तूने जनम लिया
पूरा कर दे आज वचन वो, जो गीता में जो तूने दिया
तुम बिन कोई नहीं है मोहन, भारत का रखवाला रे
बड़ी देर भई नंदलाला...
www.youtube.com/watch?v=cLwLvOb6OMU

Tuesday, August 27, 2013

ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ

ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ
ಬಾರಿಸುತ್ತಿದ್ದಾನೆ ಗಿರಿಧರ ಮೋಹನ ಮುರಳಿ
ನರ್ತಿಸುತ್ತಿದ್ದಾಳೆ...

ಕಾಲಲ್ಲಿ ಗೆಜ್ಜೆಯ ಕಟ್ಟಿ
ಸೆರಗಲ್ಲಿ ಮುಖ ಅಡಗಿಸಿ
ಹಚ್ಚಿ ಕಾಡಿಗೆ ಕಣ್ಣಲಿ... ಹೊ
ನರ್ತಿಸುತ್ತಿದ್ದಾಳೆ...

ನಯನ ಮನೋಹರ ನಲಿಯುತ್ತಿದೆ
ನಕ್ಷತ್ರದಂತೆ ಹೊಳಪು ಬೀರುತ್ತಿದೆ
ಚಂಚಲ ಮೋಹಕ ಮತ್ಸ್ಯಕನ್ಯೆ ಕೋಮಲಿ .. ಹೊ
ನರ್ತಿಸುತ್ತಿದ್ದಾಳೆ...

ಮೃದಂಗದ ವಾದನ ತಿರಿಕಿಟ್ ಧುಂ ತಿರಿಕಿಟ್ ಧುಂ ತಾ ತಾ
ನೃತ್ಯ ಚುಂ ಚುಂ ತಾತೈ ತಾತೈ ತಾ ತಾ
ಚುಂ ಚುಂ ಚನನನ ಚನನನ
ಕ್ರಾಂಧ ಕ್ರಾಂಧ ಕ್ರಾಂಧ ಧ ಧ ಧ
ನರ್ತಿಸುತ್ತಿದ್ದಾಳೆ...

ರಾಧಿಕೆ ಮಧುಬನದಲಿ
ನಿ ಸ ರೆ ಸ, ಗ ರೆ ಮ ಗ , ಪ ಮ ಧ ಪ, ನಿ ದ ಸ ನಿ
ರೆ ಸ ರೆ ಸ ನಿ ಧ ಪ ಮ ಪ ಧ ನಿ ಸ ರೆ ಸ ನಿ ಧ  ಪ ಮ
ಗ ಮ ಧ ಪ ಗ ಮ ರೆ ಸ

ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ
ಸ ಸ, ಸ ನಿ ಧ ಪ ಮ ಪ ಧ ಪ ಗ ಮ ರೆ ಸ ನಿ ರೆ ಸ
ನರ್ತಿಸುತ್ತಿದ್ದಾಳೆ ರಾಧಿಕೆ ಮಧುಬನದಲಿ
ನರ್ತಿಸುತ್ತಿದ್ದಾಳೆ...

ಓದೇ ನಾದಿರ್ ದಿರ್ಧ ನಿತಾ ಧಾರೆ  ಧಿಂ ಧಿಂ ತನನನ
ನಾದಿರ್ ದಿರ್ಧ ನಿತಾ ಧಾರೆ  ಧಿಂ ಧಿಂ ತನನನ
ನಾ ದಿರ್ ಧಿರ್ ದಿ ರ್ಧ ನಿ ತಾ ಧಾ ರೆ  ಧಿಂ ಧಿಂ ತ ನ ನ ನ
ನಾ ದಿರ್ ಧಿರ್ ಧಾನಿ ತಾ ಧಾ ರೆ
ಓ ದೇ ತಾನ ಧಿರ್  ಧಿರ್  ತಾನ , ಧಿರ್  ಧಿರ್  ಧಿರ್  ಧಿರ್ ಧುಂ  ಧಿರ್  ಧಿರ್  ಧಿರ್
ಧಾ ತಿರಿಕಟ್ ತಕ್ ಧುಂ ತಿರಿಕಟ್ ತಕ್
ತಿರಿಕಟ್ ತಿರಿಕಟ್ ತಾ ತಾ ಧಾ ನಿ
ನಾ ಧಿರ್ ಧಿರ್  ಧಣಿ ತಾ ಧಾ ರೆ

ಮೂಲ : ಶಕೀಲ್ ಬದಯೂನ್ವಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಮೊಹಮ್ಮದ್ ರಫಿ
ಸಂಗೀತ : ನೌಶಾದ್ ಅಲಿ
ಚಿತ್ರ : ಕೊಹಿನೂರ್
मधुबन में राधिका नाचे रे
गिरधर की मुरलिया बाजे रे
मधुबन में राधिका...

पग में घुँघर बाँध के
घुँघटा मुख पर डाल के
नैनन में कजरा लगा के रे
मधुबन में राधिका...

डोलत छम-छम कामिनी
चमकत जैसे दामिनी
चंचल प्यारी छब लागे रे
मधुबन में राधिका...

म्रिदंग बाजे तिरकिट धूम तिरकिट धूम ता ता
नाचत छूम छूम ताथई ताथई ता ता
छूम छूम छा ना ना ना, छूम छूम छा ना ना ना
क्रांध क्रांध क्रांध धा, धा धा धा
मधुबन में राधिका नाचे रे

मधुबन में राधिका
नी सा रे सा, गा रे मा गा, पा मा धा पा, नी धा सां नी
रें सां रे सा नी धा पा मा पा धा नी सां रें सां नी धा पा मा
गा मा धा पा गा मा रे सा

मधुबन में राधिका नाचे रे
सां सां, सां नी धा पा मा पा धा पा गा मा रे सा ऩी रे सा
सा सा गा मा धा धा नी धा सां
मधुबन में राधिका नाचे रे
मधुबन में राधिका

ओदे नादिर दिरधा नीता धारे दीम दीम तानाना
नादिर दिरधा नता धारे दीमदीम तानाना
ना दिर दिर धा नी ता धा रे दीम दीम ता ना ना
ना दिर दिर धा नी ता धा रे
ओ दे ताना दिर दिर ताना, दिर दिर दिर दिर दूम दिर दिर दिर
धा तिरकिट तक दूम तिरकिट तक
तिरकिट तिरकिट ता धा नी
ना दिर दिर धा नी ता धा रे

Monday, August 26, 2013

ಯಾವುದೇ ಉತ್ಸಾಹ ಇಲ್ಲದಾಗಿದೆ

!!ಯಾವುದೇ ಉತ್ಸಾಹ ಇಲ್ಲದಾಗಿದೆ
ಯಾವುದೇ ಉಲ್ಲಾಸ ಇಲ್ಲದಾಗಿದೆ
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ!!

!!ಆಕಾಶದಿಂದ ಬಿದ್ದೆ ನಾನು
ಒಂದು ಸಲ ಹೀಗೆ ಕಡಿದು
ಜಗ ಮತ್ತೆ ಕೇಳಬೇಡಿ
ಕೊಂಡೋದರು ಎಲ್ಲವೂ ನನ್ನ ಕಸಿದು
ಯಾರದ್ದು ಜೊತೆ ಇಲ್ಲದಾಗಿದೆ
ಯಾರದ್ದು ಜತೆ ಇಲ್ಲದಾಗಿದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

!!ಅಪ್ಪಿಕೊಂಡು ನನ್ನ ತಾಯಂದಿರನ್ನು
ಅಳಲಾಗಲಿಲ್ಲ ನನಗೆ -೨
ಪಾಲಕಿ ಸಾಗಿತು ಹೀಗೆ
ಯಾರದ್ದೋ ಶವ ಸಾಗಿದ ಹಾಗೆ
ಇದೇ ದುಃಖ ಈಗಲೂ
ನನ್ನ ದೇಹದ ಜತೆ ಇದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

!!ಕನಸಿನ ದೇವತೆ
ಏನನ್ನು ನಾನು ನಿನಗೆ ಮಾಡಲಿ ಅರ್ಪಣೆ
ಶರತ್ಕಾಲದ ನಾನು ಛಾಯೆ
ಕಣ್ಣೀರ ನಾನು ದರ್ಪಣೆ
ಇದೇ ನನ್ನ ರೂಪವಾಗಿದೆ
ಇದೆ ನನ್ನ ವರ್ಣವಾಗಿದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್
ಚಿತ್ರ : ಕಟಿ ಪತಂಗ್
Naa Koee Umang Hai, Naa Koee Tarang Hai
meree Jindagee Hain Kyaa, Yek Katee Patang Hai

aakaash Se Giree Main Yek Baar Kat Ke Ayese
duniyaa Ne Fir Naa Poochho, Lootaa Hain Muz Ko Kaise
naa Kisee Kaa Saath Hai, Naa Kisee Kaa Sang Hai

lag Ke Gale Se Apane, Baabool Ke Main Naa Royee
dolee Uthhee Yoo Jaise, Atrhee Uthhee Ho Koee
yahee Dukh To Aaj Bhee Mere Ang Sang Hai

sapanon Ke Dewataa Kyaa, Tuz Ko Karu Main Arpan
patazad Kee Main Hoo Chhaayaa, Main Aasooon Kaa Darpan
yahee Meraa Rup Hai, Yahee Meraa Rang Hai                                                                       

Sunday, August 25, 2013

ಹೌದು ನಾನು ಹೆಣ್ಣು

ನನ್ನ ಬಲಾತ್ಕಾರ ಆಯಿತೆಂದು
ಜೀವನ ನಿಲ್ಲುವುದಿಲ್ಲ ಗೆಳೆಯ
ಇನ್ನೆಷ್ಟೋ ಪರೀಕ್ಷೆ ಇದೆ ಬಾಕಿ !

ಹೆತ್ತವರ ಸ್ವಪ್ನಗಳ
ಅರಿವಿದೆ ನನಗೆ ಗೆಳೆಯ
ಅವರ ಕನಸು ನನಸಾಗುವುದು ಇದೆ ಬಾಕಿ !

ಹೌದು, ನಡೆದ ದಾರಿಯಲ್ಲಿ
ಈಗ ಕರಿ ಕತ್ತಲೆಯೆಂದು ಗೊತ್ತು ಗೆಳೆಯ  
ಆದರೆ ಹೊಸ ದಾರಿ ಹುಡುಕುವುದು ಇದೆ ಬಾಕಿ!

ಶರೀರ ಗಾಯಗೊಂಡಿದೆ ಆದರೆ
ನನ್ನ ಧೈರ್ಯ ಈಗಲೂ ಪ್ರಭಲವಾಗಿದೆ ಗೆಳೆಯ
ಬಿಡುವೆ ಹಳೆ ನೆನಪುಗಳನ್ನು ಬಿಸಾಕಿ !

ನೋಡು ನೋಡು ಅಲ್ಲಿ ದಾರಿ ಕಾಣುತ್ತಿದೆ
ಹೊಸ ದಾರಿಯಲಿ ದೀಪ ಬೆಳಗುವುದು ಗೆಳೆಯ
ನನ್ನ ಒಂದು ಹೆಜ್ಜೆ ಇಡುವುದೇ ಇದೆ ಬಾಕಿ !

ಹೌದು ನಾನು ಹೆಣ್ಣು
ಆದರೆ ಶಕ್ತಿ ಕುಸಿಯಲಿಲ್ಲ ಗೆಳೆಯ
ಈಗಲೂ ನನ್ನಲ್ಲಿ ಬದುಕನ್ನು ಎದುರಿಸುವ ಬಲ ಇದೆ ಬಾಕಿ !

by ಹರೀಶ್ ಶೆಟ್ಟಿ,ಶಿರ್ವ

ನಾನು ಕವಿಯೇನಲ್ಲ

!!ನಾನು ಕವಿಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಕವಿತೆ ಮೂಡಿತು!!
ನಾನು ಕವಿಯೇನಲ್ಲ ….

!!ನಾನು ಪ್ರೇಮಿಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಪ್ರೀತಿ ಆಯಿತು !!
ನಾನು ಕವಿಯೇನಲ್ಲ ….

!!ಪ್ರೀತಿಯ ಹೆಸರು
ನಾನು ಕೇಳಿದೆ ಆದರೆ
ಪ್ರೀತಿ ಏನೆಂದು
ನನಗೆ ತಿಳಿದಿರಲಿಲ್ಲ
ನಾನು ಸಿಕ್ಕಿಕೊಂಡೆ
ಈ ಗೊಂದಲದಲ್ಲಿಯೇ
ವೈರಿಯಂತೆ ಇರುತ್ತಿದ್ದೆ
ಗೆಳೆಯರಲ್ಲಿಯೇ
ನಾನು ವೈರಿಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಗೆಳೆತನ ಆಯಿತು!!
ನಾನು ಕವಿಯೇನಲ್ಲ ….

!!ಯೋಚಿಸುತ್ತೇನೆ ಒಂದು ವೇಳೆ
ಪ್ರಾರ್ಥಿಸುತ್ತಿದ್ದರೆ ನಾನು
ಕೈಯ ಮುಗಿದು
ಅದೇನನ್ನು ಬೇಡುತ್ತಿದ್ದೆ ನಾನು
ಅದೆಂದಿನಿಂದ ನಾನು
ನಿನ್ನನ್ನು ಪ್ರೀತಿಸಲಾರಂಭಿಸಿದೆ
ಅಂದಿನಿಂದ ನಾನೀಗೆ ಪ್ರಾರ್ಥಿಸಲಾರಂಭಿಸಿದೆ
ನಾನು ನಾಸ್ತಿಕಯೇನಲ್ಲ
ಆದರೆ ಹೇ ಸುಂದರಿ
ಅದೆಂದಿನಿಂದ ನೋಡಿದೆ
ನಾನು ನಿನಗೆ
ನನಗೆ
ಭಕ್ತಿ ಭಾವ ಮೂಡಿದೆ!!
ನಾನು ಕವಿಯೇನಲ್ಲ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಶೈಲೇಂದ್ರ ಸಿಂಗ್
ಸಂಗೀತ : ಲಕ್ಷ್ಮಿ ಕಾಂತ್  ಪ್ಯಾರೆ ಲಾಲ್
ಚಿತ್ರ : ಬೋಬೀ

Main Shaayar To Nahin
(Main Shaayar To Nahin, Magar Ae Haseen
Jab Se Dekha Maine Tujhko
Mujhko Shaayari Aa Gayi) - 2
Main Aashiq To Nahin, Magar Ae Haseen
Jab Se Dekha Maine Tujhko
Mujhko Aashiqui Aa Gayi
Main Shaayar To Nahin
(Pyaar Ka Naam Maine Suna Tha Magar
Pyaar Kya Hai, Yeh Mujhko Nahin Thi Khabar) - 2
Main To Uljha Raha Uljhanon Ki Tarha
Doston Mein Raha Dushmanon Ki Tarha
Main Dushman To Nahin
Main Dushman To Nahin, Magar Ae Haseen
Jab Se Dekha Maine Tujhko
Mujhko Dosti Aa Gayi
Main Shaayar To Nahin
(Sochta Hoon Agar Main Dua Maangta
Haath Apne Uthaakar Main Kya Maangta) - 2
Jab Se Tujhse Mohabbat Main Karne Laga
Tab Se Jaise Ibaadat Main Karne Laga
Main Kaafir To Nahin
Main Kaafir To Nahin, Magar Ae Haseen
Jab Se Dekha Maine Tujhko
Mujhko Bandagi Aa Gayi
Main Shaayar To Nahin, Magar Ae Haseen
Jab Se Dekha Maine Tujhko
Mujhko Shaayari Aa Gayi
Main Shaayar To Nahin
www.youtube.com/watch?v=jmeMg-gm1Us

Saturday, August 24, 2013

ಬೆಳ್ಳಿಯ ಗೋಡೆಯನ್ನು

!!ಬೆಳ್ಳಿಯ ಗೋಡೆಯನ್ನು ಮುರಿಯಲಿಲ್ಲ
ಮುರಿದರು ಪ್ರೀತಿ ತುಂಬಿದ ಹೃದಯವನ್ನು
ಒಂದು ಸಿರಿವಂತನ ಮಗಳು
ತೊರೆದಳು ಒಬ್ಬ ನಿರ್ಧನನನ್ನು!!

!!ಕಷ್ಟದಲಿ ನಿನ್ನ
ಜೊತೆಯಲ್ಲಿರುವೆಯೆಂದು
ನಿನ್ನೆ ತನಕ ಆಣೆ ಇಡುತ್ತಿದ್ದವಳು
ಇಂದು ತನ್ನ
ಸುಖಗೋಸ್ಕರ
ಒಬ್ಬ ಅಪರಿಚಿತನನ್ನು ವರಿಸಿದಳು
ಶಹನಾಯಿಯ ಧ್ವನಿಯಲಿ
ತೇಲಿ ಹೋದವು
ಪ್ರೇಮಿಯ ನೋವುಗಳು  
ಸಿರಿವಂತರು ಮರುಳನ ವೇದನೆಯಿಂದ
ಜೋಡಿಸಿದರು ಸಂಬಂಧವನ್ನು!!
ಒಂದು ಸಿರಿವಂತನ ಮಗಳು.....

!!ಅವರಿಗೆಲ್ಲ ಹೇಗೆ
ಅರ್ಥವಾಗುವುದು ಪ್ರೀತಿ
ಅವರಿಗೆಲ್ಲವೂ
ಬೆಳ್ಳಿ ಬಂಗಾರವಾಗಿದೆ
ಸಿರಿವಂತರ ಈ ಜಗದಲಿ
ಹೃದಯ ಒಂದು ಆಟಿಕೆಯಾಗಿದೆ
ಶತಮಾನದಿಂದಲೂ ಇದು
ಮುರಿಯುತ್ತಾ ಬಂದಿದೆ
ಹೃದಯದ ಇದೇ ದುಃಖವಾಗಿದೆ
ಮನಸಿದ್ದ ತನಕ ಹೃದಯದಿಂದ ಆಡಿದರು
ಮನಸ್ಸು ತುಂಬಿದ ನಂತರ ಮುರಿದರು ಹೃದಯವನ್ನು !!
ಒಂದು ಸಿರಿವಂತನ ಮಗಳು.....

ಮೂಲ : ಗುಲಶನ್ ಬಾವರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ವಿಶ್ವಾಸ್

Chandi Ki Deewar Na Todi
Pyar Bhara Dil Tod Diya
Ek Dhanwan Ki Beti Ne
Nirdhan Ka Daman Chhodh Diya
Chandi Ki Deewar...

Kal Tak Jisne Kasme Khai
Dukh Mein Saath Nibhane Ki
Aaj Woh Apne Sukh Ki Khatir
Ho Gayi Ek Begaane Ki
Shehnaiyon Ki Goonj Mein Dab Ke
Reh Gayi Aah Deewane Ki
Dhanwano Ne Deewane Ka
Gam Se Rishta Jod Diya
Ek Dhanwan Ki Beti Ne...

Woh Kya Samjhe Pyar Ko Jinka
Sab Kuch Chandi Sona Hai
Dhanwano Ki Is Duniya Mein
Dil To Ek Khilon Hai
Sadiyon Se Hi Toot-ta Aaya
Dil Ka Bas Yeh Rona Hai
Jab Tak Chaha Dil Se Khela
Aur Jab Chaha Tod Diya
Ek Dhanwan Ki Beti Ne ...
www.youtube.com/watch?v=dbv7C59SgX4

Wednesday, August 21, 2013

ಹೃದಯದ ಬಯಕೆ


!!ಹೃದಯದ ಬಯಕೆ
ಕಣ್ಣೀರಲ್ಲಿ ಹರಿದೋಗಿದೆ-೩
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿಯೇ ಉಳಿದೆ !!
ಹೃದಯದ ಬಯಕೆ ....

!!ಜೀವನ ಬರಿ
ತೃಷೆಯಾಗಿ ಉಳಿದಿದೆ -೨
ಪ್ರೀತಿಯ ಕಥೆಗಳೆಲ್ಲ
ಅಪೂರ್ಣ ಉಳಿದಿದೆ-೨
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿ ಉಳಿದೆ !!
ಹೃದಯದ ಬಯಕೆ ....

!!ಬಹುಶಃ ಇದು ಅವರ
ಕೊನೆಯ ಇರಬೇಕು ಯಾತನೆ -೨
ಪ್ರತಿ ಯಾತನೆಯನ್ನು
ನಾನಿದೇ ಯೋಚಿಸಿ ಸಹಿಸಿದೆ-೨
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿ ಉಳಿದೆ !
ಹೃದಯದ ಬಯಕೆ ....

!!ಸ್ವತಃ ತನ್ನನ್ನು ಸಹ
ನಾನು ಮುಗಿಸಿದೆ ಆದರೆ -೨
ಬಳಿಯಲ್ಲಿದ್ದ
ದೂರತನ ಉಳಿದಿದೆ-೨
ನಾನು ನಿಷ್ಠೆ ನೀಡಿ ಸಹ
ಏಕಾಂಗಿಯಾಗಿ ಉಳಿದೆ!!
ಹೃದಯದ ಬಯಕೆ ....

ಮೂಲ : ಹಸನ್ ಕಮಾಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಸಲ್ಮಾ ಆಗಾ
ಸಂಗೀತ : ರವಿ
ಚಿತ್ರ : ನಿಕಾಹ್


Dil ke armaan aansuon mein beh gaye
Dil ke armaan aansuon mein beh gaye
Dil ke armaan aansuon mein beh gaye
Hum wafa karke bhi tanha reh gaye
Dil ke armaan aansuon mein beh gaye

Zindagi ek pyaas bankar reh gayi
Zindagi ek pyaas bankar reh gayi
Pyar ke kisse adhoore reh gaye
Pyar ke kisse adhoore reh gaye
Hum wafa karke bhi tanha reh gaye
Dil ke armaan aansuon mein beh gaye

Shayad unka aakhri ho ye sitam
Shayad unka aakhri ho ye sitam
Har sitam ye soch kar hum seh gaye
Har sitam ye soch kar hum seh gaye
Hum wafa karke bhi tanha reh gaye
Dil ke armaan aansuon mein beh gaye

Khudko bhi humne mita daala magar
Khudko bhi humne mita daala magar
Faasle jo darmiyan the reh gaye
Faasle jo darmiyan the reh gaye
Hum wafa karke bhi tanha reh gaye
Dil ke armaan aansuon mein beh gaye
Dil ke armaan aansuon mein beh gaye
http://www.youtube.com/watch?v=phm2Tk_AkbY

Tuesday, August 20, 2013

ಮೆಲ್ಲಮೆಲ್ಲನೆ ಹಗಲು ರಾತ್ರಿ


!!ಮೆಲ್ಲಮೆಲ್ಲನೆ ಹಗಲು ರಾತ್ರಿ
ಕಣ್ಣೀರಿಡುವುದು ನೆನಪಿದೆ
ನನಗೆ ಈ ತನಕ ಪ್ರೀತಿಯ
ಆ ಸಮಯ ನೆನಪಿದೆ!!
ಮೆಲ್ಲಮೆಲ್ಲನೆ ....

!!ನಿನ್ನಿಂದ ಭೇಟಿ ಆದಾಗ
ಆ ಅತಿ ಉತ್ಸಾಹ ನನ್ನ
ಮತ್ತೆ ನೀನು ನಾಚಿ ಬೆರಳನ್ನು
ಕಚ್ಚುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಗುಟ್ಟಾಗಿ ಬಂದು ನೀನು
ನನ್ನನ್ನು ಭೇಟಿಯಾಗಿದ್ದ ಆ ಸ್ಥಳ
ಕಾಲ ಕಳೆಯಿತು ಆದರೂ
ಈ  ತನಕ ಆ ಸ್ಥಾನ ನೆನಪಿದೆ!!
ಮೆಲ್ಲಮೆಲ್ಲನೆ ....

!!ಎಳೆದು ನನ್ನ
ಪರದೆಯ ಕೋನ ಹಠಾತ್ತನೆ
ಮತ್ತೆ ಸೆರಗಿನಲ್ಲಿ
ನಿನ್ನ ಮುಖ ಅಡಗಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ....

!!ನಿನ್ನನ್ನು ಏಕಾಂತದಲಿ ಕಂಡರೆ
ಲಜ್ಜೆಯಿಂದ ನಿನ್ನ ಮುಖ ಕೆಂಪೇರಿ
ಮನಸ್ಸ ಸ್ಥಿತಿಯನ್ನು
ಮಾತು ಮಾತಲ್ಲಿ ತಿಳಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಅಗಲಿಕೆಯ ಉಲ್ಲೇಖ
ಎಂದಾದರೂ ಬಂದರೆ ಪ್ರೀತಿಯ ರಾತ್ರಿಯಲಿ
ಅದು ನಿನ್ನ ಅತ್ತು ಅತ್ತು ನನ್ನನ್ನೂ 
ಅಳುವಂತೆ ಮಾಡುವುದು ನೆನಪಿದೆ!!
ಮೆಲ್ಲಮೆಲ್ಲನೆ ...

!!ಮಧ್ಯಾಹ್ನದ ಬಿಸಿಲಲ್ಲಿ
ನನ್ನನ್ನು ಕರೆಯಲು
ಅದು ನಿನ್ನ ಅಂಗಳದಲ್ಲಿ
ಬರಿ ಕಾಲು ಬರುವುದು ನೆನಪಿದೆ !!
ಮೆಲ್ಲಮೆಲ್ಲನೆ ....

!!ಅನ್ಯರ ಕಣ್ಣು ತಪ್ಪಿಸಿ
ಎಲ್ಲರ ಇಚ್ಚೆಯ ವಿರುದ್ಧ
ಅದು ನಿನ್ನ ರಾತ್ರಿಯಲ್ಲಿ
ಗುಟ್ಟಾಗಿ ಅಡಗಿ ಬರುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಸಾವಿರಾರೂ ತಳಮಳ
ಹಾಗೂ ಲಕ್ಷಗಟ್ಟಲೆ ಬಯಕೆಯೊಂದಿಗೆ
ನಿನಗೆ ಮೊಟ್ಟ ಮೊದಲು
ನನ್ನ ಹೃದಯ ನೀಡಿದ್ದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಅನಾಸಕ್ತಿಯಿಂದ
ನನ್ನ ಹೃದಯದ ಮಾತನ್ನು ಕೇಳಿ
ಅದು ನಿನ್ನ ಕೈಯ ಬಳೆಗಳನ್ನು
ತಿರುಗಿಸುವುದು ನೆನಪಿದೆ!!
ಮೆಲ್ಲಮೆಲ್ಲನೆ ....

!!ಬಿಟ್ಟು ಹೋಗುವಾಗ
ವಿದಾಯ ಹೇಳುವಾಗ
ಆ ನಿನ್ನ ಒಣಗಿದ ತುಟಿಗಳ
ಕಂಪಿಸುವುದು ನೆನಪಿದೆ !!
ಮೆಲ್ಲಮೆಲ್ಲನೆ ....

ಮೂಲ : ಹಸನ್ ಕಮಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು :ಗುಲಾಮ್  ಅಲಿ
ಸಂಗೀತ : ರವಿ
ಚಿತ್ರ :ನಿಕಾಹ್

चुपके चुपके रात दिन आँसू बहाना याद है
हम को अब तक आशिकी का वो ज़माना याद है

तुझ से मिलते ही वो कुछ बेबाक हो जाना मेरा
और तेरा दांतों में वो उंगली दबाना याद है

चोरी-चोरी हम से तुम आ कर मिले थे जिस जगह
मुद्दतें गुजरीं पर अब तक वो ठिकाना याद है

खैंच लेना वो मेरा परदे का कोना दफ्फातन
और दुपट्टे से तेरा वो मुंह छुपाना याद है

तुझ को जब तनहा कभी पाना तो अज राह-ऐ-लिहाज़
हाल-ऐ-दिल बातों ही बातों में जताना याद है

आ गया गर वस्ल की शब् भी कहीं ज़िक्र-ए-फिराक
वो तेरा रो-रो के भी मुझको रुलाना याद है

दोपहर की धुप में मेरे बुलाने के लिए
वो तेरा कोठे पे नंगे पांव आना याद है

गैर की नज़रों से बचकर सब की मर्ज़ी के ख़िलाफ़
वो तेरा चोरी छिपे रातों को आना याद है

बा हजारां इस्तिराब-ओ-सद-हजारां इश्तियाक
तुझसे वो पहले पहल दिल का लगाना याद है

बेरुखी के साथ सुनना दर्द-ऐ-दिल की दास्तां
वो कलाई में तेरा कंगन घुमाना याद है

वक्त-ए-रुखसत अलविदा का लफ्ज़ कहने के लिए
वो तेरे सूखे लबों का थर-थराना याद है
www.youtube.com/watch?v=GWd7QXL3I7M 

Sunday, August 18, 2013

Kabir Doha (ಕಬೀರ ದೋಹ )

ಕಬೀರ ದೋಹ
ಮಹಿಳಾ ಪುರುಷರು ಎಲ್ಲರೂ ಕೇಳಿ, ಗುರುಗಳ ಭೋಧನೆ ಇದು!
ವಿಷ ಫಲ ಬೆಳೆಯುವುದು ಅನೇಕ, ನೋಡಬೇಡಿ ಯಾರೂ ಸವಿದು!!
ಅನುವಾದ by ಹರೀಶ್ ಶೆಟ್ಟಿ, ಶಿರ್ವ
कबीर दोहा
नारी पुरुष सब ही सुनो, यह सतगुरु की साख |
विष फल फले अनेक है, मत देखो कोई चाख ||

Thursday, August 15, 2013

ಹಾಡು ಹಾಡುತ ಸಾಗು

!!ಹಾಡು ಹಾಡುತ ಸಾಗು
ಓ ಸಂಗಾತಿ ಗುನುಗುನಿಸುತ ಸಾಗು
ಓ ಗೆಳೆಯನೆ.....
ನಗು ನಗುತ ಕಳೆದೋಗುವುದು
ಪ್ರತಿ ಕ್ಷಣ ಪ್ರತಿ ಗಳಿಗೆಯೂ!!
ಹಾಡು ಹಾಡುತ ಸಾಗು ....

!!ವಿಶಾಲ ನೀಲ ಅಂಬರ
ಹಸಿರು ಹಸಿರು ಭೂಮಿಯೆಲ್ಲ
ಎಷ್ಟು ನೋಡಿದ್ದರೂ
ಮನಸ್ಸಿಗೆ ತೃಪ್ತಿಯೇ ಇಲ್ಲ
ಸುಂದರ ಸುಂದರ
ಪ್ರತಿಯೊಂದು ರಚನೆಗಳು
ಹೂವು ಹೇಳುತ್ತಿದೆ
ಮುಳ್ಳಳ್ಲಿದ್ದರೂ ಕಲಿ ನೀ ನಗಲು
ಓ ಪಯಣಿಗನೆ....
ಬಾಡದಿರಲಿ ಎಂದೂ ನಿನ್ನ ಮನಸ್ಸು ಮೃದು!!
ಹಾಡು ಹಾಡುತ ಸಾಗು....

!!ಬೆಳ್ಳಿಯಂತೆ ಹೊಳಪುವುದು
ಈ ನದಿಯ ಜಲ
ಜಲದ ಪ್ರತಿಯೊಂದು ಹನಿ
ಕೊಡುವುದು ಜೀವನ ಫಲ
ಅಂಬರದಿಂದ ಸುರಿದು
ಭೂಮಿಯೊಂದಿಗೆ ಮಿಲನವಾಗುವುದು
ಜಲದ ವಿನಾಃ ಅಣ್ಣ
ಏನೂ ಕೆಲಸ ಆಗದು
ಓ ಮೇಘವೇ....
ನೀರಿಲ್ಲದಿದ್ದರೆ ಈ ಜಗ ಹೋಗುತ್ತಿತ್ತು  ಉರಿದು!!
ಹಾಡು ಹಾಡುತ ಸಾಗು ....

!!ಎಲ್ಲಿಂದ ನೀ ಬಂದೆ
ಎಲ್ಲಿಗೆ ಹೋಗಲಿದೆ ನಿನಗೆ
ಸದಾ ಸಂತೋಷವೇ
ಈ ಬಗ್ಗೆ ಅರಿವಿಲ್ಲದವನಿಗೆ
ಸರ ಸರ ಗಾಳಿಯು
ಮಾಡುತ್ತಿದೆ ಸದ್ದು
ಹಾರುವ ಪಕ್ಷಿಗಳು
ಎಳೆಯುತ್ತಿದೆ ತುಡಿತ ಮನಸ್ಸಿನದ್ದು
ಓ ಹಕ್ಕಿಗಳೇ.....
ಹಕ್ಕಿಗಳ ರೆಕ್ಕೆ ಪಡೆದು ಕಾಣೆ ನೀನಾಗು !!
ಹಾಡು ಹಾಡುತ ಸಾಗು ....

ಮೂಲ/ಸಂಗೀತ : ರವಿಂದ್ರ ಜೈನ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಜಸಪಾಲ್  ಸಿಂಗ್
ಚಿತ್ರ : ಗೀತ ಗಾತಾ ಚಲ್

Geet Gaata Chal O Saathi Gungunaata Chal
O Bandhu Re
Hanste Hansate Beete Har Ghadi Har Pal
Geet Gaata Chal...
Khula Khula Gagan Yeh Hari Bhari Dharti
Jitna Bhi Dekho Tabiyat Nahin Bharti
Sunder Se Sunder Har Ek Rachna
Phool Kahen Kaanton Mein Bhi Seekho Hansna
O Raahi Re
Kumhala Na Jaye Kahin Man Tera Komal
Geet Gaata Chal...

Chandi Sa Chamakta Yeh Nadiya Ka Pani
Pani Ki Har Ek Boond Deti Zindagani
Ambar Se Barse Zameen Se Mile
Neer Ke Bina To Bhaiya Kaam Na Chale
O Megha Re
Jal Jo Na Hota To Yeh Jag Jaata Jal
Geet Gaata Chal...

Kahan Se Tu Aaya Aur Kahan Tujhe Jaana Hai
Khush Hai Wahi Jo Is Baat Se Begaana Hai
Chal Chal Chalti Hawayen Karen Shor
Udte Pakheru Kheenche Manva Ki Dor
O Panchi Re
Panchiyon Ke Pankh Le Ke Ho Ja Tu Ojhal
Geet Gaata Chal...

Monday, August 12, 2013

Kabir Doha (ಕಬೀರ ದೋಹ )

ಕಬೀರ ದೋಹ
ನನ್ನ ನನ್ನಲ್ಲಿ ಏನಿಲ್ಲ ,ಇದ್ದದ್ದೆಲ್ಲ ನಿನ್ನ!
ನಿನ್ನ ನಿನಗೆ ನೀಡುವಾಗ, ಏಕೆ ಸಂಕೋಚ ಮನದಲಿ ನನ್ನ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मेरा मुझ में कुछ नहीं, जो कुछ है सो तोह |
तेरा तुझको सौपता, क्या लागे है मोह ||

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...