Thursday, January 17, 2013

ನಮಗ್ಯಾಕೆ ಅನ್ಯರ ಚಿಂತೆ

ಗೆಳತಿ... 
ನಮಗ್ಯಾಕೆ ಅನ್ಯರ ಚಿಂತೆ 
ನಮ್ಮ ನೇರ ಮಾತಿನಿಂದ 
ಅವರ ಒಳಿತಿದ್ದರೂ 
ಅವರಿಗೆ ಅದು 
ನಾವು ಅವರ 
ಅಪಮಾನ ಮಾಡುತ್ತಿದ್ದೇವೆ 
ಎಂದು ಅವರು ಭಾವಿಸುವರು !

ಬಿಡು ಇರುವ ನಾವು ನಮ್ಮಷ್ಟಕ್ಕೆ
ರಗಳೆ ಇಲ್ಲ
ಅವರ ಇಷ್ಟ ಕಷ್ಟ ಅವರಿಗೆ ಬಿಟ್ಟದ್ದು
ನಮಗ್ಯಾಕೆ ಅವರ ಗೋಷ್ಠಿ
ನಮಗೆ ನಮ್ಮ ಜಂಜಾಟ ಹೆಚ್ಚಾಗಿರುವಾಗ
ನಾವು ಅವರಿಗೆ ಸಕ್ಕರೆ ಕೊಡಲು ಹೋಗಿ
ಅವರು ಅದು ಉಪ್ಪೆಂದು
ನಮ್ಮ ಮೇಲೆ ಉಗುಳುವುದು ಬೇಡ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...