Monday, November 19, 2012

ನಶ್ವರ

ಬಿದ್ದ ಕಣ್ಣೀರಲ್ಲಿ ಬಣ್ಣವಿಲ್ಲ 
ಆದರೆ ಅದರಲ್ಲಿ 
ಕಾಮನಬಿಲ್ಲು ನಿನ್ನ ವೇದನೆಯ !

ಕ್ರೂರಿ ಎಂದು ಪ್ರಸಿದ್ದ ಮಾಡಿದೆ ನೀ ನನ್ನನ್ನು 
ಆದರೆ ಅದರಲ್ಲಿ 
ಅಡಗಿದೆ ನಿನ್ನ ಹೃದಯ ಪ್ರೀತಿಯ !

ಮೃತ್ಯು ಒಂದು ಕಟು ಸತ್ಯ 
ಆದರೆ ಅದರಲ್ಲಿ 
ಮಾಡಿದ ಕರ್ಮದ ಲೆಕ್ಕಾಚಾರ !

ಸುಟ್ಟು ಬಿಟ್ಟೆ ಅಲ್ಲವೇ ದೇಹವನ್ನು 
ಆದರೆ ಅದರಲ್ಲಿ 
ನೆಲೆಸಿದೆ ಆತ್ಮ ಶಾಂತಿಪ್ರಿಯ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...