Thursday, November 8, 2012

ಆಡಂಬರ

ಹಾಲನೇಕೆ ಕುಡಿಯಲಿ 
ವಿಷದ ಲೋಟೆಯಲಿ
ಬರ ಮಾಡಿಕೊಂಡು 
ನಿನ್ನ ಮನೆಯಲಿ
ಹಿಗ್ಗುವೆ ಏಕೆ ?

ನನ್ನ ಕರೆಯಲೆಂದು ನಾ ಹೇಳಲಿಲ್ಲ 
ನಿನ್ನ ಐಶ್ವರ್ಯ 
ನಿನಗೆ ಒಲಿಯಲಿ 
ಜಗ ತೋರಿಸಿ 
ಕುಣಿಯುವೆ ಏಕೆ ?

ನಾ ಇದ್ದೆ ನನ್ನ ಪ್ರಪಂಚದಲಿ
ತುಂಡು ಬಟ್ಟೆ ಗಂಜಿಯೇ ಒಳಿತಿತ್ತು ಎನಗೆ
ನೀರ ಆಸೆ ತೋರಿಸಿ
ನನ್ನ ಪಾಳು ಬಾವಿಗೆ
ಇನ್ನು ಮಣ್ಣು ಹಾಕಿ ಮುಚ್ಚುವೆ ಏಕೆ ?

ಕಣ್ಣೀರಿಲ್ಲ ಈ ಕಣ್ಣಲ್ಲಿ ಈಗ
ಬೇಸರ ಬೇಜಾರ ನನಗಾಗದು
ಉಪದೇಶ ನೀಡಿ
ಇನ್ನು ಅವಮಾನ ಮಾಡಿ
ಮೆರೆಯುವೆ ಏಕೆ ?

ಬಡವನಾದರೂ ಗತಿ ಇಲ್ಲದವನಲ್ಲ ನಾನು
ನಿನ್ನ ಸಂಪತ್ತು ಉಡುಗೊರೆ ಬೇಡ ಎನಗೆ
ಕಪಟ ಕಾರುಣ್ಯ ತೋರಿಸಿ
ಸಹಾಯವೆಂದು
ಭಿಕ್ಷೆ ನೀಡುವೆ ಏಕೆ ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...