ಅನ್ನ ನೀರಿಗೆ ಪರದಾಟ
ಪದೇ ಪದೇ ಸಂಕಟ
ಬಳಿ ಇಲ್ಲ ಒಂದು ತುಂಡು ಸೊತ್ತು!
ದಿನನಿತ್ಯ ಮನೆಯಲ್ಲಿ ಕದನ
ಮಡದಿ ಮಕ್ಕಳ ರೋದನ
ಹಿಂದೆ ಸಾಲಗಾರರು ಹತ್ತು!
ರಗಳೆ ಜಗಳ ಅಪಾರ
ಹೇಳದೆ ಕೇಳದೆ ಆದ ಪಾರ
ಪರಿವಾರ ಊರಲ್ಲಿ ಬಿಟ್ಟು !
ಹೇಗೋ ಪರದೇಶ ಬಂದ
ಜೀವನದಲಿ ತಿರುವು ತಂದ
ಮೆಲ್ಲ ಮೆಲ್ಲ ಭಾಗ್ಯ ಚಕ್ರ ತಿರುಗಿತು !
ಜೀವನ ಈಗ ಸುಖಮಯ
ಏರತೊಡಗಿತು ಆದಾಯ
ಈಗ ಕೇವಲ ದೊಡ್ಡವರ ಸಂಗ ಬೇಕಾಯಿತು !
ಅಲ್ಲಲ್ಲಿ ಮಾನ ಸನ್ಮಾನ
ಅನ್ಯರಿಗೆ ಕೊಡ ತೊಡಗಿದ ಜ್ಞಾನ
ತಾನಾಗಿಯೇ ಬಂತು ಗತ್ತು !
ಶ್ರೀಮಂತಿಕೆಯ ನಶೆಯಲಿ ತೇಲಾಡಿದ
ಬಡವರನ್ನು ಕಾಲ ಕಸದಂತೆ ನೋಡಿದ
ಮರೆತ ಮೊದಲ ಅಂತಸ್ತು !
by ಹರೀಶ್ ಶೆಟ್ಟಿ, ಶಿರ್ವ
ಪದೇ ಪದೇ ಸಂಕಟ
ಬಳಿ ಇಲ್ಲ ಒಂದು ತುಂಡು ಸೊತ್ತು!
ದಿನನಿತ್ಯ ಮನೆಯಲ್ಲಿ ಕದನ
ಮಡದಿ ಮಕ್ಕಳ ರೋದನ
ಹಿಂದೆ ಸಾಲಗಾರರು ಹತ್ತು!
ರಗಳೆ ಜಗಳ ಅಪಾರ
ಹೇಳದೆ ಕೇಳದೆ ಆದ ಪಾರ
ಪರಿವಾರ ಊರಲ್ಲಿ ಬಿಟ್ಟು !
ಹೇಗೋ ಪರದೇಶ ಬಂದ
ಜೀವನದಲಿ ತಿರುವು ತಂದ
ಮೆಲ್ಲ ಮೆಲ್ಲ ಭಾಗ್ಯ ಚಕ್ರ ತಿರುಗಿತು !
ಜೀವನ ಈಗ ಸುಖಮಯ
ಏರತೊಡಗಿತು ಆದಾಯ
ಈಗ ಕೇವಲ ದೊಡ್ಡವರ ಸಂಗ ಬೇಕಾಯಿತು !
ಅಲ್ಲಲ್ಲಿ ಮಾನ ಸನ್ಮಾನ
ಅನ್ಯರಿಗೆ ಕೊಡ ತೊಡಗಿದ ಜ್ಞಾನ
ತಾನಾಗಿಯೇ ಬಂತು ಗತ್ತು !
ಶ್ರೀಮಂತಿಕೆಯ ನಶೆಯಲಿ ತೇಲಾಡಿದ
ಬಡವರನ್ನು ಕಾಲ ಕಸದಂತೆ ನೋಡಿದ
ಮರೆತ ಮೊದಲ ಅಂತಸ್ತು !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment