Thursday, September 27, 2012

ಕಾಗದದ ದೋಣಿ


ಗೆಳತಿ....
ಈಗ ಕಾಗದದ ದೋಣಿಯಂತೆ ನಾನು
ತೇಲುತ್ತಿದ್ದೇನೆ ಈ ಕಣ್ಣೀರ ಸಾಗರದಲಿ
ಇಂದೋ ನಾಳೆಯೋ ಮುಳುಗಲ್ಲಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ

ಜೀವನ ಮರಣ


ಜೀವನಕ್ಕಿಂತ ಮರಣ ಉತ್ತಮ ಎನಿಸುತ್ತಿದೆ
ಜೀವನದ ಸುಖ ಮರಣದಲ್ಲಿ ನೀಡುತ್ತಿದ್ದಾರೆ

ಜೀವವಿದ್ದಾಗ ಯಾರು ಕರೆಯಲಿಲ್ಲ ಕೇಳಲಿಲ್ಲ
ಇಂದು ಸಾವಲ್ಲಿ ನೂರಾರು ಜನ ಬಂದಿದ್ದಾರೆ

ಜೀವವಿದ್ದಾಗ ಯಾರು ಕಣ್ಣೀರು ಒರೆಸಲಿಲ್ಲ
ಇಂದು ಅವರೆಲ್ಲ ಕಣ್ಣೀರು ಹರಿಸುತ್ತಿದ್ದಾರೆ

ಜೀವವಿದ್ದಾಗ ಯಾರು ಮುಖ ಕಾಣಲು ಬರಲಿಲ್ಲ
ಇಂದು ಅವರೆಲ್ಲ ಶವಕ್ಕೆ ಹೂಮಾಲೆ ಹಾಕುತ್ತಿದ್ದಾರೆ

ಜೀವವಿದ್ದಾಗ ಯಾರು ಒಂದು ವೇಳೆಯ ಅನ್ನ ಹಾಕಲಿಲ್ಲ
ಇಂದು ಅವರೆಲ್ಲ ಶವದ ಬಾಯಿಗೆ ಬೆಣ್ಣೆ ಸುರಿಯುತ್ತಿದ್ದಾರೆ

ಜೀವವಿದ್ದಾಗ ಯಾರು ಒಂದು ಸಣ್ಣ ಕರವಸ್ತ್ರ ನೀಡಲಿಲ್ಲ
ಇಂದು ಅವರೆಲ್ಲ ಶವಕ್ಕೆ ದೊಡ್ಡ ಶ್ವೇತ ಬಟ್ಟೆ ಹೊದಿಸುತ್ತಿದ್ದಾರೆ

ಜೀವನಕ್ಕಿಂತ ಮರಣ ಉತ್ತಮ ಎನಿಸುತ್ತಿದೆ
ಜೀವನದ ಸುಖ ಮರಣದಲ್ಲಿ ನೀಡುತ್ತಿದ್ದಾರೆ
by ಹರೀಶ್ ಶೆಟ್ಟಿ, ಶಿರ್ವ
(ಒಂದು ಹಿಂದಿ ಕವಿತೆ ಓದಿ ಬರೆದದ್ದು )

Wednesday, September 26, 2012

ನೆನಪ ಕಡಲು


ಗೆಳತಿ...
ಸಂಜೆ ಆದಾಗ ಕಡಲಲ್ಲಿ
ಸೂರ್ಯ ಮರೆಯಾದಂತೆ
ನಿನ್ನ ನೆನಪ ಕಡಲಲ್ಲಿ
ನಾನೂ ಮರೆಯಾಗುತ್ತೇನೆ
by ಹರೀಶ್ ಶೆಟ್ಟಿ, ಶಿರ್ವ

ಭೇಟಿ

ಗೆಳತಿ...
ಸಾಗರ ದಾಟಿ
ನಿನ್ನನ್ನು ಭೇಟಿ
ಆಗಲು ಬಂದೆ
ನೀನು ನನ್ನ ನೋಡಿ
ನೀನು ಯಾರೆಂದೆ?
by ಹರೀಶ್ ಶೆಟ್ಟಿ, ಶಿರ್ವ

Wednesday, September 19, 2012

ಹೇ ಗಣೇಶ

ಹೇ ಗಣೇಶ
ಅನೇಕ ನಿನ್ನ ವೇಷ
ಸುಂದರ ಸುಂದರ ರೂಪ
ಅದ್ಭುತ ಸ್ವರೂಪ
ನೀ ಬರುವುದೆ ಅಪರೂಪ
ಕಣ್ಣು ತುಂಬಾ ನೋಡಿವೆ ನಿನ್ನ
ನೀ ಬಳಿ ಇದ್ದರೆ ಎಷ್ಟು ಚೆನ್ನ
ತಿನ್ನಲು ಹೊಟ್ಟೆ ತುಂಬಾ ಮೋಧಕ ಮಿಟಾಯಿ ಬೇಡ ಅನ್ನ
ಏಕೆ ಕೆಲವೇ ದಿನ ಇರುವೆ ಸಂಗ
ಹೊರಟು ಹೋಗುವೆ ಬೇಗ ಬಿಟ್ಟು ನಮ್ಮ
ಆದರೂ ನಮಗೆ ಆನಂದ
ನೆಲೆಸುವೆ ನೀ ಸದಾ ನಮ್ಮ ಹೃದಯದಲ್ಲಿ
ಆಗಿ ತಂದೆ, ಗುರು, ಸಖ ಹಾಗು ಕಂದ
ಜೈ ಗಣೇಶ ಅಲೌಕಿಕ ನಮ್ಮ ಬಂಧ
by ಹರೀಶ್ ಶೆಟ್ಟಿ, ಶಿರ್ವ

Monday, September 17, 2012

ಖಾಲಿ ಹಾಳೆಯಾಗಿತ್ತು ಮನಸ್ಸು ನನ್ನ

ಹೇಯ್  ಹೇಯ್  ಅಹ  ಹ್ಮ್ಮ್  ಹ್ಮ್ಮ್  ಅಹ  ಅಹ  ಹ  ಹಾ  ಅಹ  ಉಮ್ಮ್  ಹ್ಮ್ಮ್ಮ್

ಕಿಶೋರ್ :
ಖಾಲಿ ಹಾಳೆಯಾಗಿತ್ತು ಮನಸ್ಸು ನನ್ನ
ನನ್ನ ನನ್ನ ನನ್ನ
ಬರೆದೆ ಅದರಲ್ಲಿ ನಾಮ ನಿನ್ನ
ನಿನ್ನ ನಿನ್ನ ನಿನ್ನ
ಖಾಲಿ ಹಾಳೆಯಾಗಿತ್ತು ಮನಸ್ಸು ನನ್ನ
ಬರೆದೆ ಅದರಲ್ಲಿ ನಾಮ ನಿನ್ನ

ಲತಾ :
ಪಾಳು ಅಂಗಳವಾಗಿತ್ತು ಜೀವನ ನನ್ನ
ಪ್ರೀತಿ ತುಂಬಿತು ಅದರಲ್ಲಿ ನಿನ್ನ

ಕಿಶೋರ್ :
ಕನಸು ನನಸಾಗದೆಂದು ಹೆದರುವೆ ನಾನು
ಪ್ರತಿನಿತ್ಯ ಕನಸಲಿ ಕಾಣುವೆ ನಿನ್ನನು -೨
ನಯನ ಚಂಚಲ ಮನೋಹರ ಈ ಸನ್ನೆ
ಖಾಲಿ ದರ್ಪಣ ಇತ್ತು ಈ ಮನಸ್ಸು ನನ್ನ
ರಚಿಸಿತು ರೂಪ ಅದರಲ್ಲಿ ನಿನ್ನ
ಖಾಲಿ ಹಾಳೆಯಾಗಿತ್ತು.....

ಲತಾ :
ನೆಮ್ಮದಿ ಕಳೆದೆ ನಿದ್ದೆ ಕಳೆದೆ ನಾನು
ಎಲ್ಲ ಎಲ್ಲ ರಾತ್ರಿ ಎಚ್ಚರವಾಗಿದ್ದು ಕಳೆಯುವೆ ನಾನು-2
ಮುಂದೇನು ಹೇಳಲಿ ನಿದ್ದೆ ಕಣ್ಣಲ್ಲಿ ಮನಸ್ಸೆಲ್ಲಿ
ಯಾವುದೇ ವೈರಿ ಆಗಿತ್ತು ಈ ಮನಸ್ಸು ನನ್ನ 
ಆಯಿತು ಪ್ರೇಮಿ ಈಗ ನಿನ್ನ
ಖಾಲಿ ಹಾಳೆಯಾಗಿತ್ತು.....

ಕಿಶೋರ್ :
ಉದ್ಯಾನದಲ್ಲಿ ಹೂವು ಅರಳುವ ಮುನ್ನ
ಲತಾ :
ನಿನ್ನ ನನ್ನ ಕಣ್ಣ ಮಿಲನದ ಮುನ್ನ-2
ಕಿಶೋರ್ :
ಎಲ್ಲಿತ್ತು ಈ ಮಾತುಗಳು 
ಲತಾ:
ಈ ಭೇಟಿಗಳು
ಕಿಶೋರ್ :
ಈ ರೀತಿಯ ರಾತ್ರಿಗಳು
ಲತಾ :
ತುಂಡಾದ ತಾರೆ ಇತ್ತು ಈ ಮನಸ್ಸು ನನ್ನ
ಕಿಶೋರ್ :
ಆಯಿತು ಚಂದಿರ ಆಗಿ ನಿನ್ನ
ಖಾಲಿ ಹಾಳೆಯಾಗಿತ್ತು...

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್, ಕಿಶೋರ್ ಕುಮಾರ್
ಸಂಗೀತ : ಎಸ್. ಡಿ.ಬರ್ಮನ್
ಚಿತ್ರ : ಆರಾಧನ

K: kora kaagaz tha ye mann mera
likh liya naam is pe tera
L: suna aangan tha jivan mera
bas gaya pyaar jis pe tera

K: (toot na jaaye sapane main darata hun
nit din sapanon men dekha karata hun) \- 2
naina kajaraare matavaare ye ishaare
khaali darapan tha ye mann mera
rach gaya roop is men tera

L: kora kaagaz tha ye man mera
likh liya naam is pe tera

L: chain ganvaaya maine nindiya ganvaai
saari saari raat jaagun dun main duhaai
kahun kya main aage neha laage ji na laage
koi dushman tha ye mann mera
ban gaya meet ja ke tera

K: kora kaagaz tha ye mann mera
likh liya naam is pe tera

K: baagon men phoolon ke khilane se pahale
L: tere mere nainon ke milane se pahale
K: kahaan ki ye baaten
L: mulaaqaaten
K: aisi raaten
L: toota taara tha ye mann mera
K: ban gaya chaand hoke tera

Both: kora kaagaz tha ye mann mera
likh liya naam is pe tera

www.youtube.com/watch?v=ql1-jjEPErw

Sunday, September 16, 2012

ಹೂವಿನ ಬಣ್ಣದಿಂದ

ಹೂವಿನ ಬಣ್ಣದಿಂದ
ಹೃದಯದ ಲೇಖನಿಯಿಂದ
ದಿನನಿತ್ಯ ಪತ್ರ ನಿನಗೆ ಬರೆಯುವೆ
ಹೇಗೆ ಹೇಳಲಿ ಹೇಗೇಗೆ ಎಂದು
ಕ್ಷಣ ಕ್ಷಣ ನೀ ನನಗೆ ಸತಾಯಿಸುವೆ
ನಿನ್ನದೇ ಕನಸು ಕಂಡು ನಾ ಮಲಗಿದೆ
ನಿನ್ನದೇ ನೆನಪಲಿ ಎಚ್ಚೆದ್ದೆ
ನಿನ್ನ ಯೋಚನೆಯಲಿ ಮುಳುಗಿದ್ದೇನೆ ನಾನು
ಮಾಲೆಯಲಿ ದಾರದಂತೆ
ಆಹಾ ...ಮುಗಿಲು  ಗುಡುಗು  ಚಂದನ ನೀರಿನನಂತೆ
ನಮ್ಮ ಪ್ರೀತಿಯ ಪರಿ
ಪಡೆಯ ಬೇಕಾಗಬಹುದು ಜನ್ಮ ನಮಗೆ
ಹಲವು ಹಲವು ಬಾರಿ
ಹಾ ....ಇಷ್ಟು ಮಧುರ ...ಇಷ್ಟು ಮಾಧುರ್ಯ ನನ್ನ ನಿನ್ನ ಪ್ರೀತಿ
ಪಡೆಯ ಬೇಕಾಗಬಹುದು ಜನ್ಮ ನಮಗೆ
ಹಲವು ಹಲವು ಬಾರಿ

ಉಸಿರ ಸಂಗೀತ
ಹೃದಯದ ಬಡಿತ
ಕನಸಿನ ಗೀತಾಂಜಲಿ ನೀನು
ಮನಸ್ಸಿನ ಅಂಗಳದಲಿ ಕಂಪು ಹರಡುವ
ಸುಂದರ ಹೂವ ಮೊಗ್ಗು ನೀನು
ಸಣ್ಣ ಪ್ರಯಾಣವಿರಲಿ
ದೂರ ಪ್ರಯಾಣವಿರಲಿ
ಮರುಭೂಮಿವಿರಲಿ ಅಥವಾ  ಜಾತ್ರೆ
ನೆನಪು ನಿನ್ನ ಬರುವುದು
ಮನಸ್ಸಾಗುವುದು
ಗುಂಪಿನ ಮಧ್ಯೆ ಏಕಾಂಗಿ
ಆಹಾ ...ಮುಗಿಲು  ಗುಡುಗು ಚಂದನ ನೀರಿನನಂತೆ
ನಮ್ಮ ಪ್ರೀತಿಯ ಪರಿ
ಪಡೆಯ ಬೇಕಾಗಬಹುದು ಜನ್ಮ ನಮಗೆ
ಹಲವು ಹಲವು ಬಾರಿ 
ಹಾ ....ಇಷ್ಟು ಮಧುರ ...ಇಷ್ಟು ಮಾಧುರ್ಯ ನನ್ನ ನಿನ್ನ ಪ್ರೀತಿ
ಪಡೆಯ ಬೇಕಾಗಬಹುದು ಜನ್ಮ ನಮಗೆ
ಹಲವು ಹಲವು ಬಾರಿ

ಪೂರ್ವವಿರಲಿ ಪಶ್ಚಿಮವಿರಲಿ
ಉತ್ತರವಿರಲಿ ದಕ್ಷಿಣವಿರಲಿ
ಎಲ್ಲ ದಿಶೆಯಲ್ಲಿ ನೀ ನಗುವೆ
ಎಷ್ಟೋ ದೂರ ನಿನ್ನಿಂದ ಹೋಗಲಿ
ಅಷ್ಟೇ ನೀ ಹತ್ತಿರ ಬರುವೆ
ಬಿರುಗಾಳಿ ತಡೆಯಿತು
ನೀರು ತಡೆಗಟ್ಟಿತು
ಹಾಸ್ಯದಿಂದ ಕರೆದರು ಪ್ರಪಂಚವೆಲ್ಲ
ಚಿತ್ರ ನಿನ್ನ ಕೈಯಲ್ಲಿ ಹಿಡಿದು
ಬಂದೆ ನಾನು ಬಿಟ್ಟು ಅವರನೆಲ್ಲ
ಆಹಾ ...ಮುಗಿಲು ಗುಡುಗು ಚಂದನ ನೀರಿನನಂತೆ
ನಮ್ಮ ಪ್ರೀತಿಯ ಪರಿ
ಪಡೆಯ ಬೇಕಾಗಬಹುದು ಜನ್ಮ ನಮಗೆ
ಹಲವು ಹಲವು ಬಾರಿ
ಹಾ ....ಇಷ್ಟು ಮಧುರ ...ಇಷ್ಟು ಮಾಧುರ್ಯ ನನ್ನ ನಿನ್ನ ಪ್ರೀತಿ
ಪಡೆಯ ಬೇಕಾಗಬಹುದು ಜನ್ಮ ನಮಗೆ
ಹಲವು ಹಲವು ಬಾರಿ

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಎಸ್.ಡಿ.ಬರ್ಮನ್
ಚಿತ್ರ : ಪ್ರೇಮ ಪೂಜಾರಿ
Phoolon Ke Rang Se Dil Ki Kalam Se Tujhko Likhi Roz Paati
Kaise Bataaoon Kis Kis Tarah Se Pal Pal Mujhe Tu Sataati
Tere Hi Sapne Lekar Ke Soya Teri Hi Yaadon Mein Jaaga
Tere Khayaalon Mein Uljha Raha Yoon Jaise Ki Maala Mein Dhaaga
Haan Badal Bijli Chandan Pani Jaisa Apna Pyar
Lena Hoga Janam Humein Kayi Kayi Baar
Haan Itna Madir Itna Madhur Tera Mera Pyar
Lena Hoga Janam Hameh Kayi Kayi Baar

Sanson Ki Sargam Dhadkan Ki Beena Sapnon Ki Geetanjali Tu
Man Ki Gali Mein Mehke Jo Hardum Aisi Juhi Ki Kali Tu
Chhota Safar Ho Lamba Safar Ho Sooni Dagar Ho Ya Mela
Yaad Tu Aaye Man Ho Jaaye Bheed Ke Beech Akela
Haan Badal Bijli Chandan Pani Jaisa Apna Pyar
Lena Hoga Janam Humein Kayi Kayi Baar
Haan Itna Madir Itna Madhur Tera Mera Pyar
Lena Hoga Janam Hameh Kayi Kayi Baar

Purab Ho Paschim Uttar Ho Dakshin Tu Har Jagah Muskuraye
All lyrics www.allthelyrics.com
Jitna Hi Jaoon Main Door Tujhse Utni Hi Tu Paas Aaye
Aandhi Ne Roka Pani Ne Toka Duniya Ne Hanskar Pukara
Tasveer Teri Lekin Liye Main Kar Aaya Sab Se Kinara
Haan Badal Bijli Chandan Pani Jaisa Apna Pyar
Lena Hoga Janam Hume Kayi Kayi Baar
Haan Itna Madir Itna Madhur Tera Mera Pyar
Lena Hoga Janam Hameh Kayi Kayi Baar
Kayi Kayi Baar
Kayi Kayi Baar
www.youtube.com/watch?v=Z4iYbxFBZKQ

Saturday, September 15, 2012

ಅನುಭವ

ಅನುಭವ
_______
ಗುಡುಗು ಸಿಡಿಲ
ಅರ್ಭಟ ಕೇಳಿ
ಹಕ್ಕಿಗಳು ಗೂಡು ಸೇರುವುದು
by ಹರೀಶ್ ಶೆಟ್ಟಿ, ಶಿರ್ವ

ಸಂಪಿಗೆಯ ಗಿಡ

ಗೆಳತಿ...
ಅಂದು
ನೀ ನೆಟ್ಟ
ಸಂಪಿಗೆಯ ಗಿಡ
ನಾನು ಪೋಷಿಸಿದ್ದೇನೆ
ಇಂದು
ಆ ಗಿಡ ಮರವಾಗಿದೆ
ಹಾಗು
ಅದರ ಹೂವಿನ ಕಂಪು
ನನ್ನ ತುಂಡು ಹೃದಯದ ಮದ್ದಾಗಿದೆ
by ಹರೀಶ್ ಶೆಟ್ಟಿ, ಶಿರ್ವ

ಇಂದು ಉನ್ಮತ್ತ ಆಗುತಿದೆ

ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ
ವಿಷಯವಿಲ್ಲದೆ ನಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ!

ಓ ರೆ ಮೊಗ್ಗೆ
ಮೆರವಣಿಗೆ ತೆಗೆ ನೀ
ಓ ರೆ ಅಲೆ
ತೊಡಿಸು ನನಗೆ ಗೆಜ್ಜೆ ನೀ
ಓ ರೆ ನದಿ
ತೋರಿಸು ಕನ್ನಡಿ ನೀ
ಓ ರೆ ಕಿರಣ
ಧರಿಸು ನನಗೆ ಸೀರೆ ನೀ
ಒಂದು ಕನ್ಯೆ ಆಗಿದ್ದಾಳೆ ಮದುಮಗಳು ಇಂದು ಹೋ ಹೋ
ಬನ್ನಿ ಎಲ್ಲಿಯೋ ಹಾರುವ ಆಗಿ ಪವನ ನಾವಿಂದು ಹೋ ಹೋ ಹೋ
ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ

ತುಂಟಾಟ ಮಾಡಲು ಬಯಸುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ !

ಯೇ...
ಇಲ್ಲಿ ನಮಗೆ ಜಗದವರು ನೋಡುವರು
ಬಾ ಹೋಗಿ ನಾವೆಲ್ಲಿಯೋ ಅಡಗೋಣ
ತನು ತನು ಮಾದಕ ದಿನ
ಹೇಗೆ ತಾನೇ ದಾಹದಲ್ಲಿರುವುದು
ನೀನು ನನ್ನ ನಾನು ನಿನ್ನ ನಿನ್ನನೆ ಹೋ ಹೋ
ನಾನು ನಿನ್ನ ನೀನು ನನ್ನ ನನ್ನಾಣೆ ಹೋ ಹೋ ಹೋ
ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ

ತುಂಟಾಟ ಮಾಡಲು ಬಯಸುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ !

ರೋಮ ರೋಮ
ಮಾಧುರ್ಯ ಹರಿಯುತ್ತಿದೆ
ಅಂಗ ಅಂಗ
ಶಹನಾಯಿ ನುಡಿಯುತಿದೆ
ಜೀವನ ಎಲ್ಲ ಸಿಕ್ಕಿದೆ ಒಂದು ಕ್ಷಣದಲಿ
ಹೇಗೋ ಇಂದು ಈ ಸಮಯ ಒದಗಿದೆ
ಮುಟ್ಟಿದೆ ನಾನು ಇಂದು ಎಲ್ಲ ಗಗನ ಹೋ ಹೋ
ನಲಿಯುತ್ತಿದೆ ನನ್ನ ಮನ ಚುಂ ಚನನ್ ಹೋ ಹೋ ಹೋ
ಇಂದು ಉನ್ಮತ್ತ ಆಗುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ

ತುಂಟಾಟ ಮಾಡಲು ಬಯಸುತ್ತಿದೆ
ನನ್ನ ಮನ
ನನ್ನ ಮನ
ನನ್ನ ಮನ !

ಮೂಲ : ನೀರಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಕಿಶೋರ್ ಕುಮಾರ್
ಸಂಗೀತ : ಎಸ್ . ಡಿ. ಬರ್ಮನ್
ಚಿತ್ರ : ಶರ್ಮಿಲೀ
aaj madahosh huaa jaaye re, meraa man meraa man meraa man
beenaa hee baat muskuraye re, meraa man meraa man meraa man

o ree kalee, sajaa too dolee
o ree lahar, pahanaa too paayal
o ree nadee, dikhaa too darpan
o ree kiran odha too aanchal
ik jogan hain banee aaj dulhan
aao ud jaaye kahee ban ke pawan
aaj madahosh huaa jaaye re, meraa man meraa man meraa man
sharaarat karane ko lalachaaye re, meraa man meraa man meraa man

ye, yahaa humei jamaanaa dekhe, aao chalo kahee chhoop jaaye
bheegaa bheegaa nashilaa din hai, kaise kaho pyaase rah paaye
too meree main hoo teraa, teree kasam
mai teree too hain meraa, meree kasam
aaj madahosh huaa jaaye re, meraa man meraa man meraa man
sharaarat karane ko lalachaaye re, meraa man meraa man meraa man

rom rom bahe sur dhaaraa, ang ang baje shahanaaee
jeewan saaraa milaa yek pal me, jaane kaisee ghadee ye aayee
chhoo liyaa aaj maine saaraa gagan
naache man aaj moraa chhoom chhanan
aaj madahosh huaa jaaye re, meraa man meraa man meraa man
sharaarat karane ko lalachaaye re, meraa man meraa man meraa man




www.youtube.com/watch?v=BKSwELrfhA8

Thursday, September 13, 2012

ಅನಾಥ

ಈ ಜಗದಲ್ಲಿ ನಾನೊಬ್ಬನೇ
ಯಾರಿಲ್ಲ ನನ್ನ
ಸಾಗುತ್ತಿದೆ ಜೀವನ ಏಕಾಂಗಿ!

ಸಿಗುವವರು ನನ್ನವರಲ್ಲ
ಅವರು ನಕ್ಕಾಗ ನಗುವೆ
ಅವರು ಅಳುವಾಗ ಅಳುವೆ !

ತಾಯಿ ಎಂದು ಕರೆಯುವೆ ಹಲವರನ್ನು
ಆದರೆ ಅವರಲ್ಲಿ ಅಮ್ಮ ಕಂಡಿಲ್ಲ
ಮೌನದಿ ಮಲಗಲು ಮಮತೆಯ ಮಡಿಲಿಲ್ಲ !

ಐಶ್ವರ್ಯ ಸಂಪತ್ತು ಪಡೆಯುವ ಬಯಕೆ ಇಲ್ಲ
ಪರಿವಾರ ಬೇಕೆಂಬ ಆಸೆ ಈ ಮನಸ್ಸಲ್ಲಿ
ಆದರೆ ನನ್ನ ಭಾಗ್ಯದಲ್ಲಿ ಈ ಸುಖವಿಲ್ಲ !

ಮನೆ ಎಂಬ ಆಶ್ರಯ ಇಲ್ಲ
ಶ್ರಮ ಪಟ್ಟು ಜೀವನ ಸಾಗಿಸುವೆ
ಆದರೆ ಈ ಜೀವನಕ್ಕೆ ಅರ್ಥವಿಲ್ಲ !

ಏಕಾಂತದಲ್ಲಿ ಕಣ್ಣೀರು ಹರಿಸುವೆ
ಆದರೆ ಈ ಕಣ್ಣೀರಿಗೆ ಕೊನೆ ಇಲ್ಲ
ಅನಾಥ ಬಾಳಿಗಿಂತ ದೊಡ್ಡ ಯಾವುದೇ ಶಿಕ್ಷೆ ಇಲ್ಲ !
by ಹರೀಶ್ ಶೆಟ್ಟಿ, ಶಿರ್ವ

ಮುಖವಾಡ

ಜೀವನದಲಿ ಧರಿಸಿದ
ಮುಖವಾಡ
ಇಂದು ಅಲ್ಲೆ ಶಾಶ್ವತವಾಗಿ ಅಂಟಿದೆ
ಪ್ರಪಂಚಕ್ಕೆ ತೋರಿಸುವ
ತನ್ನ ಸುಳ್ಳ ಮುಖವನ್ನು
ಕಳಚಲು ಹಲವು ಸರಿ ಪ್ರಯತ್ನಿಸಿದರೂ
ಸಫಲ ಆಗಲಿಲ್ಲ
ಸೋರುತ್ತಿತ್ತು ರಕ್ತ

ಚರ್ಮದಲ್ಲಿ ವೇದನೆ
ಒಂದು ಮುಖವಾಡದ ಮೇಲೆ
ಅನೇಕ ಮುಖವಾಡ ಧರಿಸ ಬೇಕಾಯಿತು
ಈಗ ಈ ಮುಖವಾಡವೆ ಸ್ಥಿರವಾಗಿದೆ
ನಿಜ ಮುಖ ಮರೆತು ಹೋಗಿದೆ
by ಹರೀಶ್ ಶೆಟ್ಟಿ, ಶಿರ್ವ

Wednesday, September 12, 2012

ಮಾತುಕತೆ

ಗೆಳತಿ
ನಮ್ಮಲ್ಲಿ
ಮಾತುಕತೆ ಇಲ್ಲ
ಆದರೂ
ನಾವು ಎಷ್ಟೊಂದು
ಮಾತನಾಡುತ್ತೇವೆ
by ಹರೀಶ್ ಶೆಟ್ಟಿ, ಶಿರ್ವ

ಮೇಘ ಹಬ್ಬಿದೆ ಮಧ್ಯ ರಾತ್ರಿಯಲಿ

ಮೇಘ ಹಬ್ಬಿದೆ ಮಧ್ಯ ರಾತ್ರಿಯಲಿ
ನಿದ್ರೆ ಆಗಿದೆ ವೈರಿ-2
ಹೇಳು ನಾನೇನು ಮಾಡಲಿ
ಮೇಘ ಹಬ್ಬಿದೆ......

ಎಲ್ಲರ ಅಂಗಳದಲಿ 
ದೀಪ ಉರಿಯುತ್ತಿದೆ
ನನ್ನ ಅಂಗಳದಲ್ಲಿ ಹೃದಯ
ಗಾಳಿಯ ತಾಪ ಕಂಟಕದಂತೆ
ಕೆಣಕುತಿದೆ ಈ ಸೆರಗು ಸೀರೆಯ-2
ಬಂದಿದೆ ಕಣ್ಣೀರ ಮೆರವಣಿಗೆ
ನಿದ್ರೆ ಆಗಿದೆ ವೈರಿ
ಹೇಳು ನಾನೇನು ಮಾಡಲಿ
ಮೇಘ ಹಬ್ಬಿದೆ......

ಮುನಿಸಿದೆ ಕನಸುಗಳೆಲ್ಲ
ಮುರಿದಿದೆ ಎಲ್ಲ ಆಸೆ ಮೋಹ
ನಯನದಿಂದ ಗಂಗೆ ಹರಿಯುತ್ತಿದೆ
ಆದರೂ ಮನಸ್ಸಲಿ ದಾಹ-2
ಯಾರಿಗೆ ಹೇಳಲಿ ಮನಸ್ಸ ಮಾತನ್ನು
ನಿದ್ರೆ ಆಗಿದೆ ವೈರಿ
ಹೇಳು ನಾನೇನು ಮಾಡಲಿ
ಮೇಘ ಹಬ್ಬಿದೆ...

ಮೂಲ : ನೀರಜ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಸಂಗೀತ : ಎಸ್ .ಡಿ. ಬರ್ಮನ್
ಚಿತ್ರ : ಶರ್ಮಿಲಿ

(Meghaa Chhaye Aadhee Raat
Bairan Ban Gayee Nindeeyaa )-2
Bataa De Main Kyaa Karu
Meghaa Chhaye....

(Sab Ke Aangan Diyaa Jale Re,
More Aangan Jiyaa
Hawaa Laage Shool Jaisee,
Taanaa Maare Chunareeyaan)-2
Aayee Hain Aansoo Kee Baaraat
Bairan Ban Gayee Nindeeyaa
Bataa De Main Kyaa Karu
Meghaa Chhaye....

(Ruthh Gaye Re Sapane Saare,
Toot Gayee Re Aashaa
Nain Bahe Re Gangaa More,
Fir Bhee Man Hain Pyaasaa)-2
Kise Kahoo Re Man Kee Baat
Bairan Ban Gayee Nindeeyaa
Bataa De Main Kyaa Karu
Meghaa Chhaye....

www.youtube.com/watch?v=2aQDjbwc-v8

Tuesday, September 11, 2012

ನಾನೊಂದು ಹಳೆ ಬಾಣಲೆ

ನಾನೊಂದು ಹಳೆ ಬಾಣಲೆ
ನನ್ನದಿತ್ತು ಒಂದು ಕಾಲ
ಆ ಸಮಯದಲ್ಲಿ
ಈ ಮನೆಯಲ್ಲಿ ನನ್ನದೇ ರಾಜ್ಯ!

ಮನೆ ಹೆಂಗಸರಿಗೆ ನಾನಂದರೆ ಜೀವದ ಗಂಟು
ನನ್ನಿಂದಲೇ ಅವರೆಲ್ಲ ಒಗ್ಗಟ್ಟು
ಅನ್ನ , ಪಾಯಸ , ಸಾರು, ಸಾಂಬಾರು , ಚಿತ್ರಾನ್ನ
ಎಲ್ಲದಕ್ಕೂ ಅವರಿಗೆ ಅಗತ್ಯ ನನ್ನ !

ಯುಗಾದಿ, ಅಷ್ಟಮಿ , ದೀಪಾವಳಿ
ನಾನು ನಿರತ ಎಲ್ಲ ಉತ್ಸವದಲ್ಲಿ
ನಾನಂದರೆ ಇಷ್ಟ  ಸಂಬಂಧಿಕರಿಗೆ, ನೆಂಟರಿಷ್ಟರಿಗೆ
ಹೊಗಳುತ್ತಿದ್ದರು ಅವರು ನನ್ನ ಸಾಮರ್ಥ್ಯಕ್ಕೆ!

ಪ್ರತಿ ದಿನ ನನಗೆ ಭವ್ಯ ಸ್ನಾನ
ತೊಳೆಯುತ್ತಿದ್ದರು ಪಳ ಪಳ ಮಿಂಚುವಂತೆ ನನ್ನ
ನನಗೆ ವಿಶ್ರಾಂತಿಸಲು ಒಂದು ಪ್ರತ್ಯೇಕ ಜಾಗ
ಹೊದೆಯುತ್ತಿದ್ದರು ನನ್ನ ಮೇಲೆ ರೇಷ್ಮೆ ಬಟ್ಟೆ ಆಗ !

ಸಮಯ ಕಳೆದಂತೆ ನನ್ನ ಅವಸ್ಥೆ ಹಾಳಾಯಿತು
ಹೊಸ ಹೊಸ ಜನಾಂಗ
ಹೊಸ ಹೊಸ ತರಹದ ಪಾತ್ರೆಗಳ ರಾಜ್ಯವಾಯಿತು
ಯಾರಿಗೂ ನನ್ನ ಅಗತ್ಯ ಇಲ್ಲದಾಯಿತು !

ಈಗ ಈ ಮನೆಯಲ್ಲಿ ಯಾರಿಲ್ಲ
ಇದ್ದವರಿಗೆ ನನ್ನ ಗೋಚರವಿಲ್ಲ
ಎಲ್ಲ ನೆಲೆಸಿದ್ದಾರೆ ಪಟ್ಟಣದಲ್ಲಿ
ನಾನು ಬಿದ್ದಿದ್ದೇನೆ ಒಂದು ಮೂಲೆಯಲ್ಲಿ !
by ಹರೀಶ್ ಶೆಟ್ಟಿ, ಶಿರ್ವ

Monday, September 10, 2012

ಪಶ್ಚಾತಾಪ

ಬೇಸರದಿ ಮನಷ್ಯ
ತಾಳ್ಮೆ ಕಳೆದು
ಗರ್ವ ಕೋಪದ ದಶೆಯಲಿ
ನಾಶ ಮಾಡುವೆ
ತಾನು ನಿರ್ಮಿಸಿದ ಸಂಸಾರವನ್ನೆಂದ
ಅಗ್ನಿ ಜ್ವಾಲೆಯಲಿ ಬೂದಿ ಮಾಡುವೆಯೆಂದು
ಕಿಡಿ ನೀಡಲು ಹೊರಟವನು
ಒಮ್ಮೆಲೇ ತನ್ನವರ ಪ್ರೀತಿಯ ಕಂಡು
ಬಿಕ್ಕಿ ಬಿಕ್ಕಿ ಅಳತೊಡಗಿದ
ಪಶ್ಚಾತಾಪದ ಕಣ್ಣೀರು ಹರಿಯತೊಡಗಿತು
ಸಂಸಾರ ಉಳಿಯಿತು by ಹರೀಶ್ ಶೆಟ್ಟಿ, ಶಿರ್ವ

ನಾನೊಂದು ಹಳೆಯ ಪತ್ರ


ನಾನೊಂದು ಹಳೆಯ ಪತ್ರ
ಇನ್ನೂ ತಲುಪದ
ಅಂಚೆ ಅಣ್ಣನ ಚೀಲದಲ್ಲಿ ಸುರಕ್ಷಿತ !

ಸುಂದರ ಅಕ್ಷರದಿಂದ ಲಿಖಿತ
ಭಾವ ನೋವ ಸಂಗಮ
ಸುಖ ದುಃಖ ವರ್ಣಿತ !

ಬರೆದಿದೆ
ಹಸು ಕರು ಹಾಕಿದೆ ಎಂದು
ಮಾವಿನ ಮರದಲ್ಲಿ ಈ ಸಲ ಮಾವಿಲ್ಲವೆಂದು
ಬರೆದಿದೆ ಮನೆ ನಾಯಿಯ ವರ್ತನೆ ವಿಚಿತ್ರ !

ಬರೆದಿದೆ
ಅಜ್ಜಿಯ ಅರೋಗ್ಯ ಕೆಟ್ಟಿದೆ
ಅಮ್ಮನ ಕಣ್ಣು ನಿನ್ನ ಕಾಯುತಿದೆ
ಬರೆದಿದೆ ತಂದೆಯ ಮೌನ ಸತತ !

ಬರೆದಿದೆ
ಮಳೆಯ ಸುದ್ದಿ ಇಲ್ಲ
ಸಾಗುವಳಿ ಆಗಲಿಲ್ಲ
ಬರೆದಿದೆ ಮನೆಯಲ್ಲಿ ಧಾನ್ಯವಿಲ್ಲದೆ ಉಪವಾಸ ವೃತ!

ಬರೆದಿದೆ
ನಿನ್ನ ಹಣ ಇನ್ನೂ ಬರಲಿಲ್ಲ
ವಿಧ್ಯುತ್ ಬಿಲ್ ಕಟ್ಟಲಿಲ್ಲ
ಬರೆದಿದೆ ದೀಪಕ್ಕೂ ಎಣ್ಣೆಯ ಕೊರೆತ !

ಬರೆದಿದೆ
ಎಲ್ಲವೂ ತೊರೆದು ಬಿಡು
ನೀ ಸೌಖ್ಯವಾಗಿ ಬೇಗ ಬಂದು ಬಿಡು
ಬರೆದಿದೆ ನೀನಿಲ್ಲದೆ ಇಲ್ಲಿ ಎಲ್ಲ ವಿಚಲಿತ !

ಆದರೆ
ನಾನು ಇನ್ನೂ ಅವನ ಕೈಗೆ ಸಿಕ್ಕಲಿಲ್ಲ
ಅವನಿಗೆ ವಿಷಯ ತಿಳಿದಿಲ್ಲ
ಈಗಲೂ ಅವನಲ್ಲಿ ಇವರಿಲ್ಲಿ ಚಿಂತಿತ !
by ಹರೀಶ್ ಶೆಟ್ಟಿ, ಶಿರ್ವ

ಗೇಣಿ


ಅವನು ಅವನಲ್ಲ
ಅವನ ಜೀವನ ಅವನದಲ್ಲ
ಅವನ ಭೂಮಿಯಲ್ಲಿಲ್ಲ ಅವನ ಹಕ್ಕು
ಅಡವು ಇಟ್ಟ ಬದುಕು!

ಅವನು ಸೂರ್ಯನಂತೆ
ಮುಂಜಾನೆ ಅವನ ಉಗಮ
ಆದರೆ ಅವನಲ್ಲಿ ಪ್ರಕಾಶ ಇಲ್ಲ
ಅವನ ಜೀವನದಲ್ಲಿ ಕತ್ತಲ ಸಾಮ್ರಾಜ್ಯ!

ಅವನು ಬಾವಿಯಂತೆ
ಸಂತೃಪ್ತ ಅವನಿಂದ ಎಲ್ಲರು
ಆದರೆ ಪಾಳು ಬಿದ್ದ ಜೀವನ
ಹಸಿವೆಯಿಂದ ನರಳುವುದು ಅವನ ಗ್ರಹಚಾರ!

ಅವನು ಎತ್ತಿನಂತೆ
ದಿನ ರಾತ್ರಿ ಉಳುವನು ಗದ್ದೆಯಲ್ಲಿ
ಆದರೆ ತನಗಾಗಿ ಒಂದು ಧಾನ್ಯ ಸಹ ಇಲ್ಲ
ಭೂಮಿಯಿಂದ ಬೆಳೆಸಲಾರ ತನ್ನ ಭವಿಷ್ಯ!

ಅವನು ದುಡಿಯುವ ಹೊಲ ಅವನದ್ದು
ಅವನು ಅದರ ಮಾಲಕ
ಆದರೆ ಅವನದಲ್ಲ
ಗೇಣಿ ತೀರಿಸುವುದೇ ಅವನ ಭಾಗ್ಯ!
by ಹರೀಶ್ ಶೆಟ್ಟಿ, ಶಿರ್ವ

Saturday, September 8, 2012

ಮನೆ ಪಾಲಾಯಿತು ಜನ ಪಾಲಾಯಿತು


ಮನೆ ಪಾಲಾಯಿತು ಜನ ಪಾಲಾಯಿತು
ಮಮತೆಯ ಮಡಿಲು ಕಣ್ಣೀರಾಯಿತು
ಸುಖ ಸಂತೋಷವೆಂಬ ಸರೋವರ
ದುಃಖದ ಸಾಗರವಾಯಿತು !

ಅಂಗಳದ ಮಧ್ಯೆ
ವಿಶಾಲ ಗೋಡೆ ನಿರ್ಮಾಣವಾಯಿತು
ತಂದೆ ಅಣ್ಣನ  ಪಾಲಿಗೆ ಬಂದ
ತಾಯಿಯ ಭಾಗ್ಯ ತಮ್ಮನ ವಶ ಆಯಿತು !

ತಂದೆ ಸಾಕಿದ
ಆ ಮಾವಿನ ಮರದ ಸಿಹಿ ಸಿಹಿ ಹಣ್ಣು
ಆ ಹಣ್ಣ ಮೇಲೆ ಇಂದು ಮಕ್ಕಳ ಸಹಿ ಆಯಿತು
ಸಿಹಿ ಮಧುರ ಸ್ನೇಹ ಇಂದು ಕಹಿ ಆಯಿತು!

ಬಾಲ್ಯದ ಸುಂದರ ಆಟ
ಇಂದು ಸಮರವಾಯಿತು
ಅಣ್ಣ ತಮ್ಮ ಎಂಬ ಸಂಬಂಧಕ್ಕೆ
ವೈರಿ ಎಂಬ ಹೊಸ ನಾಮಕರಣ ಆಯಿತು!

ಮನ ಪಾಲಾಯಿತು
ಧನ ಪಾಲಾಯಿತು
ಹೃದಯದಲ್ಲಿ ದ್ವೇಷ ಮಂಥನ ಶುರುವಾಯಿತು
ಪ್ರೇಮ ಅಮೃತ ವಿಷವಾಯಿತು!
by ಹರೀಶ್ ಶೆಟ್ಟಿ, ಶಿರ್ವ

Thursday, September 6, 2012

ಶಿಕ್ಷಕಿ

Wednesday, September 5, 2012

ಹಕ್ಕಿ ನದಿಗಳು ಈ ಹೊಯ್ಗಾಳಿ


ಹಕ್ಕಿ ನದಿಗಳು ಈ ಹೊಯ್ಗಾಳಿ
ತಡೆಯಲಾರದು ಇದನ್ನು
ಯಾವುದೇ ಗಡಿಗಳು-೨
ಗಡಿ ಕೇವಲ ಮನುಷ್ಯರಿಗಾಗಿ
ಯೋಚಿಸಿ ಗಳಿಸಿದದ್ದೇನು
ನಾವು ಮನುಷ್ಯರಾಗಿ
ಹಕ್ಕಿ ನದಿಗಳು.....

ನಾವಿಬ್ಬರು ಹಕ್ಕಿಗಳಾಗಿದ್ದರೆ
ತೇಲಿಕೊಂಡು ಇರುತ್ತಿದ್ದೆವು
ಈ ನೀಲ ಆಕಾಶದಲಿ
ನಾವಿಬ್ಬರು ಜೊತೆಯಲಿ
ರೆಕ್ಕೆಗಳನ್ನು ವಿಸ್ತರಿಸಿಕೊಂಡು
ಪೂರ್ಣ ಭೂಮಿ ನಮ್ಮದಾಗಿರುತ್ತಿತ್ತು
ನಮ್ಮದೇ ಎಲ್ಲ ನೋಟಗಳಾಗಿರುತಿತ್ತು
ಸ್ವಚ್ಚಂದ ಪರಿಸರದಲಿ ಹಾರುತ್ತಾ ಇರುತ್ತಿದೆವು-೨
ತುಂಬಿಸಿ ಪ್ರೀತಿ ನಮ್ಮ ಹೃದಯದಲಿ
ಹಕ್ಕಿ, ನದಿಗಳು.....

ನಾನು ನದಿ ಆಗಿದ್ದರೆ
ನೀನು ತಂಗಾಳಿ ಆಗಿದ್ದರೆ ಏನಾಗುತ್ತಿತ್ತು
ಓ .....ನಾನು ನದಿ ಆಗಿದ್ದರೆ
ನೀ ತಂಗಾಳಿ ಆಗಿದ್ದರೆ ಏನಾಗುತ್ತಿತ್ತು
ತಂಗಾಳಿಯ ಅಲೆಗಳು
ನದಿಯ ದೇಹ ಸ್ಪರ್ಷಿಸುವಾಗ -೨
ಅಲೆಗಳೇ ಅಲೆಗಳು ನಿರ್ಮಾಣಗೊಳ್ಳುವುದು
ನಾವಿಬ್ಬರು ಸಿಕ್ಕಿದಾಗ ಹೀಗಾಗುವುದು
ಎಲ್ಲ ಹೇಳುವರು ಈ ಅಲೆಗಳು ಎಲ್ಲಿಯೂ ಹೋಗಲಿ
ಯಾರೂ ಇದನ್ನು ತಡೆಯದಿರಲಿ
ಹಕ್ಕಿ,ನದಿಗಳು.....

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸೋನು ನಿಗಮ್, ಅಲ್ಕಾ ಯಾಗ್ನಿಕ್
ಸಂಗೀತ : ಅನು ಮಲಿಕ್


Panchhi Nadiyan Pawan Ke Jhoken, Koi Sarhad Na Inhe Roke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain
Socho Tumne Aur Maine Kya Paya Insaan Hoke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain,
Socho Tumne Aur Maine Kya Paya Insaan Hoke...

Jo Hum Dono Panhi Hote, Tairtey Hum Is Neel Gagan Mein
Pankh Pasarey
Saari Dharti Apni Hoti, Apne Hote Saare Nazarey
Khuli Fizaoon Mein Udte, Khuli Fizaoon Mein Udte
Apne Dilon Mein Hum Saara, Pyar Samaa Ke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain, Socho Tumne Aur Maine Kya Paya Insaan Hoke...

Jo Main Hoti Nadiyan Aur Tum Pawan Ke Jhoken, To Kya Hota
O, Jo Main Hoti Nadiyan Aur Tum Pawan Ke Jhoken
To Kya Hota
Pawan Ke Jhoken Nadi Ke Tan Ko Jab Chu Te Hain
Pawan Ke Jhoken Nadi Ke Tan Ko Jab Chu Te Hain
Laiharein Hi Laiharein Banti Hain
Hum Dono Jo Milte To Kuch Aisa Hota
Sabh Kehte Ye Laihar Laihar Jahan Bhi Jayein
Inko Na Koi Toke
Panchhi Nadiyan Pawan Ke Jhoken, Koi Sarhad Na Inhe Roke
Sarhadein Insaanon Ke Liye Hain
Socho Tumne Aur Maine Kya Paya Insaan Hoke...

Panchhi Nadiyan Pawan Ke Jhoken, Koi Sarhad Na Inhe Roke...


www.youtube.com/watch?v=6nvTzT5hhD0

ಜಿರಲೆ

ಗೆಳತಿ
ಅಂದು
ಜಿರಲೆ ಕಂಡು ನೀನು
ಹೆದರಿ ಜೋರಾಗಿ ಕಿರುಚುತ
ನನ್ನನ್ನು ಅಪ್ಪಿಕೊಂಡಿದೆ
ಇಂದು
ಜಿರಳೆ ಕಂಡು ನನಗೆ ನಿನ್ನ
ನೆನಪು ಅಪ್ಪಿಕೊಳ್ಳುತ್ತಿದೆ
by ಹರೀಶ್ ಶೆಟ್ಟಿ ,ಶಿರ್ವ

Tuesday, September 4, 2012

ಮಗು ಹುಡುಗಿ


ನಾನೊಂದು ಬಾಡಿದ ಹೂ
ಹುಟ್ಟಿದ ದಿನದಿಂದಲೇ
"ಮಗು ಹುಡುಗಿ"
ಎಂದು ನೀಡಿದ ಶಾಪ

ಎಲ್ಲರ ನಿರ್ಲಕ್ಷ
ಅಪಾದನೆ ಲಕ್ಷ
ನನ್ನ ಕೋಮಲ ಮನಸ್ಸು
ನುಚ್ಚು ನೂರು

ಬಾಲ್ಯ ಪ್ರತಿಬಂಧಕ
ಇಲ್ಲ ಯಾರೂ ಸಖ
ಆಡುವ ವಯಸ್ಸಲ್ಲಿ
ಕೆಲಸದ ಭಾರ

ಹೆಜ್ಜೆ  ಹೆಜ್ಜೆಯಲಿ ಪರೀಕ್ಷೆ
ಸ್ವತಃ ಪಾಲಕರ ಶಿಕ್ಷೆ
ಮಗನಿಗೆ ರಾಜೋಪಚಾರ
ನನಗೆ ಊಟ ಅಂದರೆ ಭಿಕ್ಷೆ

ಯೌವನ ಮುಳ್ಳ ಕಟ್ಟು
ಸುಂದರತೆ ಅಪತ್ತು
ಬದುಕಲು ದಿನನಿತ್ಯ
ಹೊಡತೆಗಳ ಆಹಾರ

ಕನಸು ಕಾಣಲು ಭಯ
ನನ್ನ ನಗುವಿನಲೂ ಸಂಶಯ
ಮನೆಯಿಂದ ಹೊರ ದೂಡಲು
ಮಾಡುವರು ಉಪಾಯ

ನಾನೊಂದು ಬಾಡಿದ ಹೂ
ಹುಟ್ಟಿದ ದಿನದಿಂದಲೇ
"ಮಗು ಹುಡುಗಿ"
ಎಂದು ನೀಡಿದ ಶಾಪ
by ಹರೀಶ್ ಶೆಟ್ಟಿ, ಶಿರ್ವ

ಅಸೂಯೆಯ ಬಾಣ

ಮನುಜ...
ಕೊಲ್ಲಬೇಡ ಯಾರನ್ನೂ ಬಿಟ್ಟುನಿನ್ನ ಅಸೂಯೆಯ ಬಾಣ
ಯಾರಿಲ್ಲ ಇಲ್ಲಿ ಎಲ್ಲ ತಿಳಿದ ಜಾಣ
ಯಾರಿಲ್ಲ ಇಲ್ಲಿ ಏನೂ ತಿಳಿಯದ ಕೋಣ
ಅಸೂಯೆಯ ಜ್ವಾಲೆ ತೀಕ್ಷ್ಣ
ಉರಿಯುವೆ ಅದರಲ್ಲಿ ನೀನೆ ಕ್ಷಣ ಕ್ಷಣ
ಬಿಟ್ಟು ಬಿಡು ಈ ವ್ಯರ್ಥ ಚಟ ತಕ್ಷಣ
by ಹರೀಶ್ ಶೆಟ್ಟಿ, ಶಿರ್ವ

Monday, September 3, 2012

ಪ್ರೀತಿಯ ಆ ದಿನಗಳು

ಪ್ರೀತಿಯ ಆ ದಿನಗಳು
ಈಗ ಸ್ವಪ್ನವಾಗಿ ಉಳಿದಿದೆ
ಸಂಬಂಧದಲ್ಲಿ ಈಗ ಒಂದು
ಕಹಿ ಸೇತುವೆ ನಿರ್ಮಾಣವಾಗಿದೆ

ನನ್ನ ಮೌನ
ಈಗ ನಿನಗೆ ರೇಗಿಸುವುದಿಲ್ಲ
ನನ್ನ ಮಾತು
ಈಗ ನಿನಗೆ ರುಚಿಸುವುದಿಲ್ಲ

ಮಾತಾಡಲು ಪ್ರಯತ್ನಿಸಿದರೆ 

ನೀ ನಿನ್ನ ಕೆಲಸದಲ್ಲಿ ಮಗ್ನವಾಗುವೆ
ನನಗೆ ಏನಾದರು ಬೇಕಾದಾಗ
ನೀ ಕೇಳಿ ಕೇಳದ ಹಾಗೆ ಮಾಡುವೆ

ನಾ ಕಚೇರಿಯಿಂದ ಬಂದಾಗ
ನಿನಗೆ ಖುಷಿ ಆಗುವುದಿಲ್ಲ
ನಾನು ಪ್ರವಾಸಕ್ಕೆ ಹೋಗುವಾಗ
ನಿನ್ನ ಹೃದಯ ಹೆದರುವುದಿಲ್ಲ

ನಾನು ತುಂಬಾ ಪ್ರಯತ್ನ ಮಾಡಿ
ಏನೋ ಹೇಳಿದಾಗ
ನೀ ನಿನ್ನ ತಾಳ್ಮೆ ಕಳೆದು
ಏನೇನೊ ಉತ್ತರಿಸುವೆ

ಜೀವನದ ಚಕ್ರ
ನಿಂತು ಹೋಗಿದೆ
ಆ ಸುಂದರ ದಿನಗಳು
ಎಲ್ಲಿ ಮಾಯವಾಗಿದೆ

ಆದರೂ ಪ್ರಯತ್ನಿಸುವೆ
ಈ ಕಹಿ ಸೇತುವೆಯನ್ನು ಮುರಿಯಲು
ಸಿಹಿ ಬಾಂಧವ್ಯ ನಿರ್ಮಿಸಲು
ಪುನಃ ಪ್ರಯತ್ನಿಸುವೆ ನಿನ್ನನ್ನು ಪಡೆಯಲು
by ಹರೀಶ್ ಶೆಟ್ಟಿ, ಶಿರ್ವ

ನೆನಪಿನ ದರ್ಬಾರು


ಗೆಳತಿ...
ಪ್ರೀತಿಯ ಯುದ್ಧದಲ್ಲಿ
ನಿನ್ನಿಂದ ಸೋತು
ಎಲ್ಲವೂ ಕಳೆದು ಕೊಂಡೆ
ಆದರೂ ಈಗ ನನ್ನ
ಮನಸ್ಸ ಸಾಮ್ರಾಜ್ಯದಲ್ಲಿ
ಕೇವಲ ನಿನ್ನದೆ ಆಡಳಿತ
by ಹರೀಶ್ ಶೆಟ್ಟಿ, ಶಿರ್ವ

Sunday, September 2, 2012

ಗೆಳೆಯ

ಗೆಳೆಯ
ನನ್ನ ನಿನ್ನ ಈ ಸಂಬಂಧಕ್ಕೆ
ಯಾವ ಹೆಸರು ನೀಡಲಿ
ನನಗೆ ನೋವಾದಾಗ
ಕಣ್ಣೀರು ಕಾಣುವೆ ನಾ ನಿನ್ನ ಕಣ್ಣಲ್ಲಿ

ನಾನು ಕಷ್ಟದಲ್ಲಿದ್ದಾಗ
ನೀ ಓಡಿ ಬರುವೆ ನನ್ನಲ್ಲಿ
ಕರೆಯದೆ ಬರುವುದಿಲ್ಲ
ನೀ ಎನ್ನ ಸುಖದಲ್ಲಿ

ನನ್ನಿಂದ ಮುನಿದಾಗ
ನೀ ಬೇಕಂತೆ ಎನ್ನನ್ನು ನಿರ್ಲಕ್ಷಿಸುವೆ
ಸ್ವತಃ ತನಗೆ ಕಷ್ಟ ಕೊಟ್ಟು
ನೀ ಬೇಕಂತೆ ಎನಗೆ ವೇದನೆ ನೀಡುವೆ

ಎನ್ನ ಸ್ನೇಹ ಪವಿತ್ರ ಗೆಳೆಯ
ನನ್ನಿಂದ ಮನಸ್ತಾಪ ಬೇಡ
ನನ್ನಿಂದ ದೂರ ಇರಬೇಡ
ನನ್ನ ಹೃದಯ ನೋವಿಸ ಬೇಡ
by ಹರೀಶ್ ಶೆಟ್ಟಿ, ಶಿರ್ವ

ನನ್ನವಳಲ್ಲ

ಗೆಳತಿ
ಅನೇಕ ವರುಷಗಳ ನಂತರ
ನಿನ್ನನ್ನು ಕಂಡ
ನನ್ನ ಕಣ್ಣುಗಳಿಗೆ ಆಶ್ಚರ್ಯ
ಹೃದಯಕ್ಕೆ ಸಂತಸ
ಮನಸ್ಸಿಗೆ ನೆಮ್ಮದಿ
ಆದರೆ
ನೀನೀಗ ನನ್ನವಳಲ್ಲ ಎಂಬ ಬೇಸರ
by ಹರೀಶ್ ಶೆಟ್ಟಿ, ಶಿರ್ವ

Saturday, September 1, 2012

ಹನಿ ಹನಿ ಮಳೆ ಬೀಳುತ್ತಿದೆ


ಹನಿ ಹನಿ ಮಳೆ ಬೀಳುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ-೨

ಮೊದಲೂ ಹೀಗೆಯೇ
ಸುರಿದಿತ್ತು ಈ ಮುಗಿಲು
ಮೊದಲೂ ಹೀಗೆಯೇ
ನೆನೆದಿತ್ತು ಈ ಸೆರಗು-೨
ಇದೇ ವರ್ಷ ಯಾಕೆ ಪ್ರಿಯೆ
ಹೀಗೆ ಆಗುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಈ ಸಲ ವರ್ಷ ಋತು
ಉರಿಯುತ್ತಿದೆ
ಈ ಸಲ ವಾತಾವರಣ
ಉನ್ಮತ್ತವಾಗಿದೆ-೨
ತಂಗಾಳಿಯಲಿ
ಮಾದಕತೆ ತುಂಬಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಗೆಜ್ಜೆಯ ಸ್ವರ ಕೇಳುತ್ತಿದೆ
ಮಳೆಯ ಹನಿಯಲ್ಲಿ
ಅವಿತಿರುವ ಬಯಕೆಗಳು
ಕುಣಿಯುತ್ತಿದೆ ಈ ಕಂಗಳಲಿ-೨
ಹೇಗೆ ಕನಸು
ಈ ನಯನ ನೋಡುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಸಭೆಯಲ್ಲಿ ಹೇಗೆ
ಹೇಳಲಿ ಅವರಿಂದ
ಹೃದಯ ಕೂಡಿ ಬರುತ್ತಿದೆ
ಯಾರೋ ಅಪರಿಚಿತರಿಂದ-೨
ಉಪಾಯವಿಲ್ಲದೆ
ಹೃದಯ ಬಳಲುತ್ತಿದೆ
ಮನಸ್ಸ ತಾಪ ಏರುತ್ತಿದೆ
ನೆನೆಯುತ ಈ ಮಳೆಯಲ್ಲಿ
ವಾತಾವರಣ ಜ್ವಲಿಸುತ್ತಿದೆ

ಮೂಲ : ಯೋಗೇಶ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ ,ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್

रिमझिम गिरे सावन
सुलग-सुलग जाए मन
भीगे आज इस मौसम में
लगी कैसी ये अगन

पहले भी यूँ तो बरसे थे बादल
पहले भी यूँ तो भीगा था आंचल
अब के बरस क्यूँ सजन, सुलग-सुलग जाए मन
भीगे आज...

इस बार सावन दहका हुआ है
इस बार मौसम बहका हुआ है
जाने पी के चली क्या पवन, सुलग-सुलग जाए मन
भीगे आज...

जब घुंघरुओं सी बजती हैं बूंदे
अरमाँ हमारे पलके न मूंदे
कैसे देखे सपने नयन, सुलग-सुलग जाए मन
भीगे आज...

महफ़िल में कैसे कह दें किसी से
दिल बंध रहा है किस अजनबी से
हाय करें अब क्या जतन, सुलग-सुलग जाए मन
भीगे आज...
www.youtube.com/watch?v=037txJ9TZGg

ಮನಸ್ಸ ವೇದನೆ

ಗೆಳತಿ....
ನನ್ನ
ಮನಸ್ಸ ವೇದನೆ
ಕಣ್ಣೀರಾಗಿ
ನಿನ್ನ ಕಂಗಳಿಂದ
ಹೇಗೆ ಹರಿಯುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ

ಹೊಸ ಬೆಳಕು


ಹಲವು ಮುಂಜಾನೆಯ ನಂತರ
ಇಂದು ನಾನು ಎಚ್ಚರವಾಗಿದ್ದೇನೆ
ಸತ್ಯದ ಬೆಳಕು ಕಣ್ಣು ಕುಕ್ಕುತಿತ್ತು
ಭಯದ ಚಳಿ ಆವರಿಸಿತು
ಸುಳ್ಳ ಮಬ್ಬು ಕವಿದಿತ್ತು
ವಾಸ್ತವದ ಸೂರ್ಯ ಬೇರೆಯೇ ಕಾಣುತ್ತಿದ್ದ
ತೆರೆದ ಕಣ್ಣಲ್ಲಿ ಸಂತಾಪ ಇತ್ತು
ಜೀವನದ ಬಹುಮೂಲ್ಯ ಸಮಯ ವ್ಯರ್ಥ ಮಾಡಿದ್ದಕ್ಕೆ
ಹೃದಯ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿತ್ತು
ಅದರೂ ಆಶಾದಾಯಕ ಹೊಸ ಬೆಳಕು
ಒಂದು ಅವಕಾಶ ನೀಡುತ್ತಿತ್ತು
ತನ್ನನ್ನು ಸಾವರಿಸಲು
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...