Thursday, June 14, 2012

ಸತ್ಯ ಸುಳ್ಳು


ಅವರು ಮಹಾಪುರುಷ, ಆಧ್ಯಾತ್ಮಿಕ ಗುರು, ಸತ್ಯವಂತರು.

ನ್ಯೂಸ್ ಸಂದರ್ಶನ ಮಾಡುವವರು ಅವರನ್ನು ಕೇಳಿದರು " ಗುರುಗಳೇ ಇಂದು ಹಲವು ಸ್ವಾಮಿಗಳ , ಗುರುಗಳ ಒಳ ಗುಟ್ಟು ಬಹಿರಂಗವಾಗುತ್ತಿದೆ, ಇದರಿಂದ ನಿಮ್ಮ ಇಮೇಜ್ ಹಾಳಾಗುದಿಲ್ಲವೇ , ಇದರ ಬಗ್ಗೆ ನೀವೇನು ಹೇಳುವಿರಿ.

ಗುರುಗಳು ಶಾಂತವಾಗಿ ನಕ್ಕರು ಹಾಗು ಕೇಳಿದರು " ಸತ್ಯದ ವಿರುದ್ದ ಏನು" ?

ಸಂದರ್ಶಕ : ಸುಳ್ಳು

ಗುರುಗಳು : ರಾಮ ರಾವಣರಲ್ಲಿ ವಿಜಯಿ ಆದದ್ದು ಯಾರೂ ?

ಸಂದರ್ಶಕ : ರಾಮ

ಗುರುಗಳು : ಹಾಗಾದರೆ ನಾನು ಸತ್ಯ ಆದರೆ ನನಗೆ ಚಿಂತೆ ಮಾಡಬೇಕಾಗಿಲ್ಲ  ಸತ್ಯದ ಜಯವಾಗುವುದು, ನಾನು ಸುಳ್ಳಾದರೆ ನನ್ನ ವಿನಾಶ ನಿಶ್ಚಿತ.

by ಹರೀಶ್ ಶೆಟ್ಟಿ, ಶಿರ್ವ

_________________________

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...