Saturday, June 23, 2012

ಶಿಕ್ಷೆ

ಏನು ಮಾಡಲಿ
ಯಾರನ್ನು ಕೇಳಲಿ
ಮನಸ್ಸಲ್ಲಿ ಅಡಗಿಸಿದ ವ್ಯಥೆಯನ್ನು
ಹೇಗೆ ಹೇಳಲಿ!

ಮಾಡಿದ ತಪ್ಪಿಗೆ
ಯಾವ ಶಿಕ್ಷೆ ಅನುಭವಿಸಲಿ
ಕಲ್ಲ ಬಂಡೆಯಲಿ
ಹೇಗೆ ಹೂವು ಅರಳಿಸಲಿ!

ಮೌನದ ಮಾತಿಗೆ
ಹೇಗೆ ಉತ್ತರಿಸಲಿ
ಶಾಂತ ಸರೋವರದಲಿ
ಹೇಗೆ ಕಲ್ಲು ಎಸೆಯಲಿ!

ಕೋಪದ ಜ್ವಾಲೆಯನ್ನು
ಹೇಗೆ ತಣಿಸಲಿ
ದುಃಖದ ಏರು ಸಮುದ್ರದಲಿ
ಹೇಗೆ ದೋಣಿ ಸಾಗಿಸಲಿ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...