Tuesday, June 19, 2012

ಏಕೆ ಬೇಸರ

ಎಲ್ಲವೂ ಇದೆ ನನ್ನ ಹತ್ತಿರ
ಯಾವುದೇ ಆಸೆ ಇಲ್ಲ
ಯಾವುದೇ ಆಕಾಂಕ್ಷೆ ಇಲ್ಲ
ಆದರೂ ಈ ಮನಸ್ಸಲಿ ಏಕೆ ಬೇಸರ !

ನೀರಸ ವಾತಾವರಣ
ಓಡುತ್ತಿರುವ ಮನ
ದಾಹ ಇಲ್ಲದ ಭೂಮಿ ಬಂಜರ
ಆದರೂ ಈ ಮನಸ್ಸಲಿ ಏಕೆ ಬೇಸರ !

ಸುಖ ಸಂತೋಷ ಮನೆಯಲಿ
ದುಃಖ ಏನೆಂದು ಗೊತ್ತಿಲ್ಲ
ಪ್ರಶ್ನೆ ಹಲವು ಸಿಗುವುದಿಲ್ಲ ಉತ್ತರ
ಆದರೂ ಈ ಮನಸ್ಸಲಿ ಏಕೆ ಬೇಸರ !

ಸುತ್ತ ಮುತ್ತ ಹಾವಳಿ ನನ್ನವರ
ಸುಖ ಸೌಕರ್ಯ
ಉತ್ತಮ ಉಪಚಾರ
ಆದರೂ ಈ ಮನಸ್ಸಲಿ ಏಕೆ ಬೇಸರ !

ಸೋತಿದೆ ಕಣ್ಣುಗಳು
ಉಳಿಯಲಿಲ್ಲ ಕನಸುಗಳು
ತುಂಬಿದ ಜೀವನ ಖಾಲಿ ಕರ
ಆದರೂ ಈ ಮನಸ್ಸಲಿ ಏಕೆ ಬೇಸರ !
by ಹರೀಶ್ ಶೆಟ್ಟಿ, ಶಿರ್ವ




No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...