Wednesday, June 6, 2012

ಪಂಜರ

ಯಾಕೆ ಹೀಗೆಯೇ
ಜೀವನ ಕಳೆಯುವೆ
ಎಲ್ಲ ಆಸೆ ಆಕಾಂಕ್ಷೆಯನ್ನು
ಹೃದಯದಲ್ಲಿ ಅಡಗಿಸುವೆ
ಮನಸ್ಸಲ್ಲಿದ್ದ ಭಾವನೆಗಳನ್ನು
ಹೊರ ಚಿಮ್ಮಲು ಬಿಡು
ಮಲಗಿದ ಬಯಕೆಗಳನ್ನು ಎಬ್ಬಿಸು
ಒಣಗಿದ ರೆಂಬೆಯಲ್ಲಿ
ಪುನಃ ಎಲೆ ಚಿಗುರಬಹುದು
ನಂದಿ ಹೋದ ಬೂದಿಯಲ್ಲಿ 
ಜ್ವಾಲೆ ಧಗಧಗಿಸಬಹುದು
ಬಾಡಿದ ಹೂಗಳು
ಪುನಃ ಪರಿಮಳಿಸಬಹುದು 
ಪ್ರಪಂಚದ ರೂಢಿ ಪರಂಪರೆಯನ್ನು ಬಿಟ್ಟು ಬಿಡು
ಹೃದಯದ ಮಾರ್ಗ ಅನುಸರಿಸು
ಮುಚ್ಚಿದ ಪಂಜರ ತೆರೆ
ಸ್ವಚ್ಚ ನಿರ್ಮಲ ಗಾಳಿಯಲ್ಲಿ ಉಸಿರಾಡು
ಜೀವನದ ಮಧುರ ಗೀತೆ ಹಾಡು
by ಹರೀಶ್ ಶೆಟ್ಟಿ, ಶಿರ್ವ




No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...