Monday, May 28, 2012

ಕಷ್ಟ ಕಾಲ ಬೇಕೇ ಬೇಕು

ಸುಲಭ ಜೀವನ ಯಾಕೆ
ಕಷ್ಟ ಕಾಲ ಬೇಕೇ ಬೇಕು !

ಕಲ್ಲು ಮುಳ್ಳು
ಗುಡ್ಡೆ ಪರ್ವತ
ಏರು ಪೇರು
ಜೀವನದಲಿ ಇಂಥ ಅಡಚಣೆ ಬರಲೇ ಬೇಕು!

ಸೋಲು ಸಮಸ್ಯೆ
ನೋವು ವೇದನೆ
ಪೀಡೆ  ಹತಾಶೆ
ಸಹಿಸುವ ಅವಕಾಶ ಸಿಗಲೇ ಬೇಕು!

ಮಳೆ ಬಿರುಗಾಳಿ
ಪ್ರವಾಹ ಸುನಾಮಿ
ಬೆಂಕಿ ಭೂಕಂಪವೆಂಬ
ಪ್ರಾಕೃತಿಕ ವಿಕೋಪ ಎದುರಿಸಲೇ ಬೇಕು !

ಸುಲಭ ಜೀವನ ಯಾಕೆ
ಕಷ್ಟ ಕಾಲ ಬೇಕೇ ಬೇಕು !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...