Saturday, May 26, 2012

ನಿಯತಿ

ತುಂಡು ತೊಟ್ಟಿಲು 
ತೂಗುವಾಗ ಕರ್ಕಶ ಸ್ವರ 
ಸಡಿಲಾದ ಮೊಳೆ
ಬೀಳುವ ಭಯ
ಮಲಗಿದ ಬಾಲ್ಯ 
ಆದರೂ ಅರಳುತಿದೆ ಮಗುವಿನ ಮುಖದಲಿ ಹಾಸ!

ಹಸಿರು ಫಲಭರಿತ ಮರ
ಗಾಳಿಯ ವೇಗ
ಬೀಳುವ ಹಣ್ಣು
ಪೂರ್ಣ ರಸಭರಿತ
ಹಕ್ಕಿ ಪ್ರಾಣಿಗಳಿಗೆ ಸಂತಸ
ಆದರೂ ಹಲವು ಹಣ್ಣುಗಳಿಗೆ ಕೊಳೆಯುವ ಭಾಗ್ಯ!

ಡೊಂಕು ರಸ್ತೆ 
ವಾಹನದಲಿ ನಿಯಂತ್ರಣ
ಚಂಚಲ ಯೌವನ
ಓಡುವ ಇಂಧನ
ಅಪಘಾತದ ಸಂಭವನ
ಆದರೂ ವೇಗದಿಂದ ತಲುಪುವ ಮನ !

ಸಿಹಿ ನೀರ ಬಾವಿ
ತುಂಬಿದ ಕೊಡಪಾನ
ಎಲ್ಲ ಹಸಿರು ಹಸಿರು
ಪರಿಸರ ಶಾಂತ
ದಣಿದ ಪ್ರವಾಸಿಗರಿಗೆ ಅಮೃತ 
ಆದರೂ ಅನೇಕರ ತಣಿಸದ ದಾಹ !

ಮನ ಚರಂಡಿ ಕಲುಷಿತ ನೀರು
ಎಲ್ಲ ಮಲಿನ ಮಲಿನ
ಜೀವ ಜಂತು ಹೂಳು ಕೊಳೆ ಪಾಚಿ
ಕ್ರಿಮಿ ಕೀಟಗಳ ವಸತಿ
ರೋಗ ದುರ್ವಾಸನೆ ಸೊಳ್ಳೆಗಳು 
ಆದರೂ ಪ್ರಜ್ಞಾಹೀನ ಮನುಜ ಮತಿ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...