Sunday, May 20, 2012

ಆಸರೆ

ತವರು ಮನೆ ಬಿಟ್ಟು
ನಿನ್ನೊಂದಿಗೆ ಸಂಸಾರ ಹೂಡಿದೆ
ನೀನೆ ಸರ್ವಸ್ವ ಎಂದು ಭಾವಿಸಿ
ನಿನ್ನನ್ನು ಪೂಜಿಸಿ ಸೇವೆ ಮಾಡಿದೆ
ಮಂದಿರ ಮಾಡಿದ ಮನೆಯಲ್ಲಿ
ಈಗ ಕೇವಲ ನಿನ್ನ ರೌದ್ರ ರೂಪ
ನಾನು ನಂಬಿದ ದೇವರು ಅಲ್ಲಿಲ್ಲ !

ನೀನೆ ನನ್ನ ಭಾಗ್ಯವೆಂದು ತಿಳಿದು
ನಿನ್ನ ಸುಖ ಕಷ್ಟಗಳನ್ನು
ನನ್ನದೆಂದು ಸ್ವೀಕರಿಸಿದೆ
ಆದರೆ ನನ್ನ ಔದಾರ್ಯದ
ನಿನಗೆ ಪರವೆ ಇಲ್ಲ
ಹೊರ ಪುಷ್ಪಗಳ ಸುಗಂಧದಲಿ ಲಿಪ್ತ ನಿನಗೆ
ಬಾಡಿದ ಮನೆ ಹೂವಿನ ಗೋಷ್ಠಿ ಇಲ್ಲ !

ನಿನ್ನ ಜೀವನ ಬೆಳಗಿಸಿದ
ನನಗೆ ಕರಿ ಕತ್ತಲೆಯ ಉಡುಗೊರೆ
ಅಲ್ಲಿ ಈಗ ಬೆಳಕಿನ ಕಿರಣವಿಲ್ಲ
ಜಗತ್ತಿನ ಜಗಮಗದಲಿ
ಮರೆಯಾದ ನಿನಗೆ
ನಿನ್ನ ಸಂಸಾರದಲಿ
ಅಂಧಕಾರವಾದದ್ದು ಗೊತ್ತಿಲ್ಲ !

ನೀನೆ ನನ್ನ ಆಸರೆ
ಎಂದು ಭಾವಿಸಿದ ನನಗೆ
ಈಗ ಆಶ್ರಯವಿಲ್ಲದಾಗಿದೆ
ನನ್ನ ಜೀವನದಲಿ ಬರೆದ ನಿನ್ನ ಹೆಸರು
ನನ್ನ ಕಣ್ಣೀರಿಂದ ಅಳಿಸಿ ಹೋಗಿದೆ
ನಿನ್ನನ್ನು ಇನ್ನೂ ನಂಬಿ ಪ್ರಯೋಜನವಿಲ್ಲ
ಈಗ ನನಗೆ ನಿನ್ನಲ್ಲಿ ಆಸೆ ಇಲ್ಲ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...