Saturday, May 12, 2012

ನಿಸ್ಸಹಾಯ ಪ್ರೀತಿ

ಎಷ್ಟು ಸುಲಭ ಅಲ್ಲವೇ ಗೆಳೆಯ
ಹೇಳುವುದು
ನನ್ನನ್ನು ಮರೆ ಎಂದು
ಆದರೆ ಎಷ್ಟು ಕಠಿನ ಅಲ್ಲವೇ
ಮರೆಯುವುದು ಅಂದರೆ !

ನೀ ಹೇಳಿದಕ್ಕೆ
ನಾನು ಪ್ರಯತ್ನಿಸುವೆ
ನನ್ನ ಹೃದಯವನ್ನು ಸಾವರಿಸುವೆ
ನಿನ್ನ ಮಾತನ್ನು ನಾನು
ನಿರಾಕರಿಸಲಾರೆ ಗೆಳೆಯ !

ಸುರಿಮಳೆಯಲ್ಲಿ ಶುರುವಾದ
ನಮ್ಮ ಪವಿತ್ರ ಪ್ರೀತಿ
ಇಂದು ಕಣ್ಣೀರ ಹನಿಯಾಗಿ ಹರಿಯುತ್ತಿದೆ
ಆದರೆ ನಿನ್ನ ತ್ಯಾಗ ಆದರ್ಶವನ್ನು
ನಾನು ಮೆಚ್ಚುವೆ ಗೆಳೆಯ !

ನೀನು ನನ್ನಿಂದ ದೂರವಾಗುವುದು
ನನ್ನ ಭಾಗ್ಯ ನಿನ್ನ ನಿಸ್ಸಹಾಯಕತೆ
ಆದರೆ ನಾನು ಅರಿಯುವೆ ನಿನ್ನ ವ್ಯಥೆ
ನಿನ್ನ  ಮನಸ್ಸು ಹೃದಯ
ಎಷ್ಟು ಅಳುತ್ತಿದೆ ಎಂದು ನನಗೆ ತಿಳಿದಿದೆ ಗೆಳೆಯ !

ಹೋಗು ಗೆಳೆಯ ಹೋಗು
ನನ್ನಿಂದ ದೂರ ಹೋಗು
ಸುಖವಾಗಿ ಬಾಳು
ಇಂದು ಹರಿಯುತ್ತಿರುವ ನನ್ನ ಕಣ್ಣೀರು ಸಹ
ಕೇವಲ ನಿನ್ನ ಸುಖವನ್ನೇ ಬೇಡುತ್ತಿದೆ ಗೆಳೆಯ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...