Tuesday, May 8, 2012

ಸಂಜೆ ಆದಂತೆ

ಸಂಜೆ ಆದಂತೆ 
ನೆನಪ ಬಾಗಿಲು ತೆರೆದು 
ಬೇಜಾರ ಮನಸ್ಸಿಂದ 
ನಿನ್ನನ್ನು ಹುಡುಕಲು
ಅಲ್ಲಿ ಇಲ್ಲಿ ಅಲೆಯುತ್ತೇನೆ !

ನೀನು ಬರುತ್ತಿದ್ದ
ಸ್ಥಾನದಲ್ಲಿ ಕುಳಿತು
ಗಾಳಿಯ ಸ್ಪರ್ಶದಿಂದ
ನಿನ್ನ ಉಪಸ್ಥಿತಿಯ ಸುಗಂಧವನ್ನು ಪಡೆಯಲು
ವೇದನೆಯಿಂದ ಬಳಲುತ್ತೇನೆ !

ನೀನು ಬರುತ್ತಿದ್ದ ಮಾರ್ಗದಲ್ಲಿ
ನಿನ್ನ ಗೆಜ್ಜೆಯ ಸ್ವರವನ್ನು ಕೇಳಲು
ನಿನ್ನ ಲಜ್ಜೆಯಿಂದ ಕೆಂಪಾಗುವ
ಮುಖ ನೋಡಲು
ಆತುರ ಪಡುತ್ತೇನೆ  !

ಆದರೆ ಬೇಸರದಿಂದ
ನೆನಪು ಕಣ್ಣೀರಾಗಿ ಹರಿದು ಬಂದು
ನಾನು ನನ್ನ ಮೌನ
ಮನಸ್ಸನ್ನು ಗಟ್ಟಿ ಮಾಡಿ
ಕುಗ್ಗಿದ ಮನಸ್ಸಿಂದ ಹಿಂತಿರುಗಿ ಬರುತ್ತೇನೆ !
by ಹರೀಶ್ ಶೆಟ್ಟಿ, ಶಿರ್ವ


No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...