Wednesday, October 31, 2012

ಶ್ರಮ

ಸಾವಿರಾರು ಕನಸುಗಳ
ಭಾರ ಹೊತ್ತು
ನಡೆದೆ ಪ್ರಯಾಣಕ್ಕೆ !

ತಾಣದ ಅರಿವಿಲ್ಲ
ಗುರಿಯ ಗೋಚರವಿಲ್ಲ
ಚಿಂತೆ ಏಕೆ ಒಣಗಿದ ಮರಕ್ಕೆ !

ಹಗಲು ರಾತ್ರಿ ಪ್ರವಾಸ
ಎಲ್ಲೆಲ್ಲೋ ನಿವಾಸ
ತಡೆ ಇಲ್ಲ ಗಾಳಿಯ ವೇಗಕ್ಕೆ !

ಜೀವನದಲಿ ಋತು ವಸಂತ ಬರುವುದು
ಸುಖದ ಪುಷ್ಪ ಅರಳುವುದು
ಅರ್ಹತೆ ಸಿಗುವುದು ಮಾಡಿದ ಶ್ರಮಕ್ಕೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...