Thursday, March 22, 2012

ಶರಣ

ಬಾಲ್ಯ ಭ್ರಮಿತ
ಕೆಟ್ಟ ಸಂಗತ
ದೂರ ವಿದ್ಯೆ
ಗುರಿ ಇಲ್ಲದ ಜೀವನ

ಕಳ್ಳತನ ವ್ಯಭಿಚಾರ
ದರೋಡೆ ಕೊಲೆ
ಮಾದಕ ವ್ಯಸನ
ತಪ್ಪು ಮಾರ್ಗದಲಿ ಜೀವನ

ಅಸ್ಥಿರ ನಿವಾಸ
ಜೈಲು ಪ್ರವಾಸ
ದುಷ್ಟರ ಸಹವಾಸ
ವ್ಯರ್ಥ ಅಲೆಯುತ್ತಿದ್ದ ಜೀವನ

ಅವಳ ಸಾಮಿಪ್ಯ
ಬೇಟಿ ಪ್ರತಿನಿತ್ಯ
ಅರಿವಾಯಿತು ಅವಳ ಅಗತ್ಯ
ದಾರಿಗೆ ಬಂತು ಜೀವನ

ಪ್ರೇಮ ಪಾವನ
ತಿರುಗಿತು ಜೀವನ
ಬಾಳು ವೃಂದಾವನ
ಈಗ ಅವಳ ಶರಣ ಜೀವನ
by ಹರೀಶ್ ಶೆಟ್ಟಿ, ಶಿರ್ವ






No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...