Thursday, March 15, 2012

ಉತ್ತರ

ಆ ಹರಿದ ಪುಸ್ತಕದ ಹಾಳೆಗಳು
ಈಗಲೂ ಹಲವು ಕಥೆಗಳನ್ನು ಹೇಳುತ್ತಿದೆ
ನಿನಗಾಗಿ ಬರೆದ ಕವನಗಳು
ಇಂದೂ ನನ್ನನ್ನು ಪ್ರಶ್ನಿಸುತ್ತಿದೆ
ಶೂನ್ಯ ಸೂಚಿಸುವ ನನ್ನ ಮುಖದಲ್ಲೆಲ್ಲಿದೆ ಉತ್ತರ  !

ಹೇಗೆ ಬದಲಾಯಿತ್ತಲ್ಲವೇ ಜೀವನ
ನೆನೆಸಿ ಮೈಯಲಾಗುತ್ತದೆ  ಕಂಪನ
ನಮ್ಮ ಪ್ರೀತಿಯಲ್ಲಿದ್ದ ಸಮರ್ಪಣ
ಪಾಲಕರ ಅನಾವಶ್ಯಕ ನಿರಾಕರಣ
ಅಂದು ನಡೆದ ಘಟನೆಗಳಲ್ಲಿ ಹುಡುಕುತ್ತಿದ್ದೇನೆ ಉತ್ತರ !

ಇಂದು ನಮ್ಮ ಬೇರೆ ಬೇರೆ ಸಂಸಾರ
ಈಗ ನಾವು ನಿರತ ನಮ್ಮ ಪ್ರತ್ಯೇಕ ಪರಿವಾರದಲಿ
ಹೃದಯದಲಿ ಆಗುವ ನೋವು ಅಡಗಿದೆ
ನಮ್ಮ ಸುಳ್ಳು ವ್ಯವಾರಿಕ ನಗು ಮುಖದಲಿ
ಈ ವೇದನೆ ಈಗಲೂ ಏಕೆ ಎಂದು ಕೇಳಿದರೂ ಸಿಗುದಿಲ್ಲ ಉತ್ತರ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...