Sunday, March 4, 2012

ತಿರುವು

ಮುಚ್ಚಿದ ಕಮಲ ಅರಳಿತು
ಸೂರ್ಯನ ಕಿರಣ ದೊರಕಿದ ನಂತರ !
ನಿಸರ್ಗ ಸೌಂದರ್ಯ ಪಸರಿಸಿತು
ಮಂಜಿನ ಹನಿ ಕರಗಿದ ನಂತರ !
ನವಿಲು ತನ್ನ ಗರಿ ತೆರೆಯಿತು
ಮಳೆಯ ಹನಿ ಭೂಮಿಯ ಮೇಲೆ ಬಿದ್ದ ನಂತರ !
ಜೀವನದಲಿ ಒಂದು ತಿರುವು ಬಂತು
ಅವಳ ಪ್ರೀತಿಯ ಆಗಮನದ ನಂತರ !
by  ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...