Saturday, February 25, 2012

ಉದ್ಯಾನದ ಗಿಡ

ನಾನೂ ಆ ಉದ್ಯಾನದ
ಗಿಡವಾಗಿದೆ
ದಿನ ನಿತ್ಯ 
ಪುಷ್ಪಗಳನ್ನು ಹೆತ್ತು
ಅರಳಿಸಿ ಅನೇಕರ
ಮನ ಸೆಳೆಯುತ್ತಿದ್ದೆ!

ನನ್ನ ಹೂವನ್ನು 
ಕಿತ್ತುವಾಗ ನನ್ನ
ಮುಳ್ಳಿಂದ ಅವರಿಗೆ
ಗಾಯವಾಗಿ
ಅಜ್ಞಾನದಿಂದ ಮನಸ್ತಾಪದ
ರಕ್ತವ  ಸೋರಿಸಿದೆ !

ನನ್ನ ಹೂವಿನ ಪರಿಮಳ
ಈಗ ಅವರಿಗೆ  ದ್ವೇಷದ
ಗಬ್ಬು ವಾಸನೆಯಾಗಿ
ಉದ್ಯಾನದಲಿ ನನ್ನ ಉಪಸ್ಥಿತಿ
ಬೇಡವಾಗಿ ಹೊರ ಬಿದ್ದು
ಕಣ್ಣೀರ ಸುರಿಸಿದೆ !

ಭೂಮಿ ಮಣ್ಣ ಕಡಿಮೆ ಇಲ್ಲದೆ
ಹೇಗೋ ಪುನಃ ಜೀವವಾದೆ
ಪುಷ್ಪಗಳನ್ನು ಹುಟ್ಟಿಸಿದೆ  
ಆದರೆ ಅರಳಿದ ಹೂವು ಹೀಗೆಯೇ
ಬಿದ್ದು ಮಣ್ಣಿಗೆ ಸೇರಿದ ನಂತರ
ನೋವಿಂದ ಬಳಲಿದೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...