Sunday, February 12, 2012

ಮರಿ ಆಡಿನ ವ್ಯಥೆ

ಹುಲ್ಲು ಮೇಯಲು ಬಂದಿದೆ
ದಾರಿ ತಪ್ಪಿ ಹೋದೆ
ಎಲ್ಲಿದೆ ನೀ ಒಡೆಯ
ಹುಡುಕುತ್ತಿದ್ದೇನೆ ನಾನು

ಸೂರ್ಯ ವಿಶ್ರಾಮಿಸಲು ಸಿದ್ದ
ಕತ್ತಲೆ ಕವಿಯಲು ಬದ್ಧ
ನೀನೆಲ್ಲಿ ಒಡೆಯ
ಚಿಂತೆಯಲ್ಲಿದ್ದೇನೆ ನಾನು

ಮೋಡಗಳ ಆರ್ಭಟ
ಗುಡುಗು ಮಿಂಚಿನ ಚಟಪಟ
ಬೇಗ ಬಾ ಒಡೆಯ
ಭಯಬೀತನಾಗಿದ್ದೇನೆ ನಾನು

ಇನ್ನು ನಿನ್ನ ಬಿಟ್ಟು ದೂರ ಹೋಗಲಾರೆ
ನಿನ್ನ ಕಾವಲು ಛಿದ್ರ ಮಾಡಲಾರೆ
ಕ್ಷಮಿಸು ಒಡೆಯ
ಲಜ್ಜಿತನಾಗಿದ್ದೇನೆ ನಾನು
by ಹರೀಶ್ ಶೆಟ್ಟಿ , ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...