Saturday, February 18, 2012

ದೇಶ ಭಕ್ತಿ

ಗುರಿಯನ್ನು ಗಳಿಸುವ
ಆಸೆಯಲಿ
ತನ್ನ ಮುಗ್ಧ ಬಾಲ್ಯವನ್ನು
ಮುಗಿಸಿದರು !

ದೇಶ ಭಕ್ತಿಯ 
ಭಾವನೆಯಲಿ
ತನ್ನ ಆತ್ಮಿಯರನ್ನು  
ಮರೆತರು !

ದೇಶವನ್ನು ರಕ್ಷಿಸಲು
ಹೋರಾಟದಲಿ
ತನ್ನ ಜೀವ ಕೊಟ್ಟು
ಹುತಾತ್ಮರಾದರು!

ಆ ವೀರರ ಹೆಸರನ್ನು
ಸರಕಾರ 
ಕೇವಲ ರಸ್ತೆಯ ಹೆಸರಿಡಲು
ಬಳಸಿದರು !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...