Saturday, November 26, 2011

ಮೋಕ್ಷ

ನನ್ನಿಂದ ಎಲ್ಲರೂ ದೂರವಾದರು
ಕೇವಲ ಸತ್ಯ ಹೇಳಿದಕ್ಕೆ........
________________________
ಸತ್ಯದ ಶವ ಮಣ್ಣಲ್ಲಿ ಅಡಗಿತ್ತು
ಅದರ ಮೇಲೆ ಸುಳ್ಳು ಬೆತ್ತಲೆ ನರ್ತಿಸುತ್ತಿತ್ತು ........
_________________________
ಅವಳು"ನೀನು ಪ್ರಾಪಂಚಿಕತೆ ಕಲಿ"
ಎಂದು ಹೇಳಿ ನನ್ನನ್ನು ಬಿಟ್ಟು ಹೋದಳು...... 
_________________________
ಕೋಟಿ ಕೋಟಿ ಹಣ ಸಂಪಾದಿಸಿದೆ
ಮೋಹ ಮುಗಿಯುತ್ತಲೇ ಭಿಕ್ಷುಕನಾದೆ .....
__________________________
ನಾನೊಬ್ಬನೇ ಈ ಪ್ರಪಂಚದಲ್ಲಿ
ಈಗ ನಾನು "ಸನ್ಯಾಸಿ" ........
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...