Wednesday, November 9, 2011

ನೀನು ಬಿಟ್ಟು ಹೋದ ನಂತರ

ನೀನು ಬಿಟ್ಟು ಹೋದ ನಂತರ
ನಾನು ಕವಿಯಾದೆ

ಪ್ರೀತಿಸುವೆ ನಿನ್ನನ್ನು ಎಂದು ಹೇಳಲು 
ವರುಷ ವರುಷ ನಾ ಕಳೆದೆ
ಇಂದು ನಾ ಪದಗಳ ದಾಸನಾದೆ

ಮಳೆಯ ಹನಿಯಲಿ ನೆನೆದು
ನಿನ್ನ ಒಟ್ಟಿಗೆ ನದಿಯನ್ನು ದಾಟಿದ ನೆನಪು
ಇಂದು ಸ್ವತಹ ಕಣ್ಣೀರ ಕಡಲಾದೆ

ಹಸಿರು ಬಯಲಲ್ಲಿ ಅಳೆದು
ನಿನ್ನ ಒಟ್ಟಿಗೆ ಮರದ ಅಡಿಯಲ್ಲಿ ಸಮಯ ಕಳೆದು
ಇಂದು ನಾನು ಒಣಗಿದ ಬಯಲಾದೆ

ನಿನ್ನ ರೂಪ ಗುಣವನ್ನು ಮೆಚ್ಚಿ ನಾ ನನ್ನನ್ನೇ ಮರೆತೆ
ಮಧ್ಯೆ ಹಾದಿಯಲಿ ನೀನು ನನ್ನನ್ನು ಬಿಟ್ಟು ಹೋದೆ
ಇಂದು ನೀನು ಕೇವಲ ನನ್ನ ಕವಿತೆಯಲ್ಲಿಯೇ ಉಳಿದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...