Saturday, October 22, 2011

ಸರ್ವಾಧಿಕಾರ

ಸರ್ವಾಧಿಕಾರದ ಮಾಡಬೇಡ ದುರುಪಯೋಗ
ಈ ಪಟ್ಟ ಸಿಕ್ಕಿದೆ ನಿನ್ನ ಯೋಗ

ನಡೆಯದು ಬಹಳ ದಿವಸ ಈ ಮಹಾಯೋಗ
ನಿನ್ನ ಕಿರೀಟದ ವಜ್ರ ಬೀಳಲಿದೆ ಬಹು ಬೇಗ

ರಾಜನ ಕರ್ತವ್ಯವನ್ನು ಮರೆಯಬೇಡ
ಪ್ರಜೆಯ ಮಹತ್ವವನ್ನು ಅಲಕ್ಷ್ಯ ಮಾಡಬೇಡ

ಹಿಟ್ಲರ್ ನಂತ ಹಲವು ಪ್ರಮುಖರು ಸರ್ವಾಧಿಕಾರದ ಮೋಹಕ್ಕೆ ಬಲಿಯಾದರು
ವಿಲಾಸಿತ ಜೀವನ ಜೀವಿಸಿದ ಕರ್ನಲ್ ಗದ್ದಾಫಿಯು ಇಂದು ಗುಂಡಿನ ಗುರಿಯಾದರು

ಬದಲಾಯಿಸಿಕೋ ತನ್ನನ್ನು ಯೋಗ್ಯ ಶಾಷಕನಾಗು ನೀನಾದರೂ
ರಾಜನಾಗಿ ಬೇಡ ಪ್ರಜೆಯ ಸೇವಕನಾಗಿರು ಇನ್ನಾದರೂ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...