Monday, October 10, 2011

ಪ್ರಪಂಚ ಏಕೆ ಹೀಗೆ ?

ಪ್ರಪಂಚ ಏಕೆ ಹೀಗೆ ?
ನಾವೊಂದು ಮಾಡುವುದು
ಅವರೊಂದು ಬಯಸುವುದು
ಆವರಿಗೆ ನಮ್ಮ ಉಪಕಾರ
ನಮಗೆ ಅವರ ಅಪಕಾರ

ಬಂದ ಬಡವನಿಗೆ
ಅನ್ನ ದಾನ ಕೊಟ್ಟು
ಆಶ್ರಯ ನೀಡಿ ಕೆಲಸಕ್ಕೆ ಇಟ್ಟು
ಮನೆಯವನಾಗಿ ಇದ್ದು ಉಂಡು ತಿಂದು
ದ್ರೋಹ ಮಾಡಿ ಓಡಿ ಹೋದನಲ್ಲವೇ

ಗೆಳೆಯನೆಂದು ಕರೆದು
ಅವನ ಒಟ್ಟಿಗೆ ಬೆರೆತು
ತನ್ನ ಹೃದಯದ ಎಲ್ಲ ಮಾತನ್ನು ಹೇಳಿ ಕೇಳಿ
ಜೀವಕ್ಕೆ ಜೀವ ಕೊಡಲು ಸಿದ್ಧನಿದ್ದವ
ಸಾಲವ ಪಡೆದು ತೊರೆದು ಹೋದನಲ್ಲವೇ

ಅನಾಥ ಮಗುವನ್ನು
ಮನೆಗೆ ತಂದು ಮುದ್ದಾಗಿ ಬೆಳೆಸಿ
ವಿದ್ಯೆ ನೀಡಿ ಪಾಠ ಕಲಿಸಿ
ಜೀವನದ ಅರ್ಥ ಕಲಿಸಿದವನಿಗೆ
ಕಡೆಗೆ ಅನಾಥ ಮಾಡಿ ಬಿಟ್ಟು ಹೋದನಲ್ಲವೇ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...