Wednesday, October 19, 2011

ಮಮತೆಯ ವೇದನೆ

ನೀ ಹುಟ್ಟಿದಾಗ
ತೃಪ್ತಿಯಿಂದ ನಕ್ಕೆ
ನನ್ನದೇ ಜೀವದ
ರಕ್ತ ಸೋರಿ ನಿನ್ನನ್ನು ಪಡೆದೆ
ನಿನ್ನ ಆಗಮನದಿಂದ
ಮನೆ ತುಂಬಾ ನಲಿದೆ

ನಿನ್ನ ಬೆಳೆವಣಿಗೆಯನ್ನು
ಮನ ಮೀರಿ ನಿರೀಕ್ಷಿಸಿದೆ
ನಿನ್ನ ಬಾಲ್ಯ ಆಟ ನೋಡಲು
ಆಸೆಯಿಂದ ಕಾದೆ
ನಿನ್ನ ನಡಿಕೆ ನೋಡಿ ನಗಲು
ಹೃದಯದಿಂದ ದೇವರಲ್ಲಿ ಬೇಡಿದೆ

ಆದರೆ ನೀನೇಕೆ ಹೀಗೆ ಕಂದಾ ?
ಏಕೆ ನಿನ್ನ ಶರೀರದಲ್ಲಿ ಬೆಳೆವಣಿಗೆ ಇಲ್ಲ ?
ಇದೇನು ಡಾಕ್ಟರ ಹೇಳುತ್ತಿರುವುದು
ನಿನ್ನ ಶರೀರ ಬುದ್ದಿ ಬೆಳೆಯಲಿಕ್ಕೆ ಇಲ್ಲ ಅಂತ
ನೀನು ಯಾವುದೋ ರೋಗದಿಂದ ಬಳಲುತ್ತಿದ್ದಿ ಅಂತ
ಡಾಕ್ಟರ ಗೆ  ಏನು ಹುಚ್ಚಾ

ಏಕೆ.. ಏಕೆ ದೇವರೇ ಈ ಪುಟ್ಟ ಜೀವಗೆ ಈ ಶಿಕ್ಷೆ ?
ಏಕೆ ತಾಯಿ ಮನಸ್ಸಿಗೆ ಈ ವೇದನೆ?
ನಾನು ಮಾಡಿದ ತಪ್ಪಾದರೂ ಏನು ?
ನನ್ನ ಕಂದನಿಗೆ ಎಲ್ಲ ಮಕ್ಕಳಂತೆ ಬದುಕುವ ಹಕ್ಕು ಇಲ್ಲವೇ ಇನ್ನು ?
ಅವನೇಕೆ ಮಾತನಾಡುದಿಲ್ಲ ಇನ್ನು ?
ನನ್ನನ್ನು ಅಮ್ಮ ಎಂದು ಕರೆಯುವುದಿಲ್ಲವೇ ಅವನು?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...