Saturday, October 8, 2011

ಮರಳಿ ಬಾ

ಏಕೆ ನಾನಿಷ್ಟು ಕೊರಗುವೆ ?
ನಿನ್ನದೇ ಯೋಚನೆಯಲಿ ಏಕೆ ಮುಳುಗುವೆ ?
ನನ್ನ ಹೃದಯ ಏಕೆ ನಿನ್ನ ದಾಸ  ?
ಏಕೆ ಅಲ್ಲಿ ನಿನ್ನದೇ ವಾಸ ?

ನಿನ್ನ ಕೋಪಕ್ಕೆ ನಾ ಏಕೆ ಹೆದರುವೆ ?
ನಿನ್ನ ಅಗಲಿಕೆಯಿಂದ ನಾ ಏಕೆ ಕಷ್ಟ ಪಡುವೆ ?
ನನ್ನ ಚಿಂತೆ ನಿನಗಿಲ್ಲವೇ ?
ಸ್ವಲ್ಪವು ವ್ಯಥೆ ನಿನಗಾಗುದಿಲ್ಲವೇ ?

ಈ ಸಂಬಂಧಕ್ಕೆ ಯಾವ ಹೆಸರು ಕೊಡಲಿ
ಮನಸ್ಸಿನ ನೆಮ್ಮದಿ ಹೇಗೆ ಪುನಃ ಪಡೆಯಲಿ
ಈ  ಮೋಹದ ಕಾರಣ ಎಲ್ಲಿ ಹುಡುಕಲಿ
ಇದರ ಉತ್ತರವಿಲ್ಲ ನಿನ್ನಲ್ಲಿ ನನ್ನಲ್ಲಿ

ದುಂಬಿ ಹೂವನ್ನು ಬಿಟ್ಟು ಇರಬಹುದೇ ?
ಸಸಿ ನೀರಿಲ್ಲದೆ ಬದುಕಬಹುದೇ ?
ನನ್ನ ಕಣ್ಣಿರು ಹೇಳದೆ ಕೇಳದೆ ಬರುತಿದೆ
ನನ್ನ ಹೃದಯ ನಿನ್ನನ್ನೇ "ಮರಳಿ ಬಾ" ಎಂದು ಕರೆಯುತಿದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...