Thursday, September 22, 2011

ಯುವ ಚಿಂತನೆ

ನನಗೆ ಬೇರೆ ಯಾರು ?
ನೀವಿಲ್ಲದೆ ನಾನು ಯಾರು?
ಪ್ರೀತಿಯಲಿ ಏಕೆ ಕರಾರು ?

ನಿಮ್ಮಿಂದಲೇ ನನ್ನ ಜನ್ಮ ಅಲ್ಲವೇ ?
ನೀವೇ ನನ್ನ ಬಾಳಿನ ದೇವರಲ್ಲವೇ?
ಸ್ವಲ್ಪ ನನ್ನ ತಪ್ಪನ್ನು ಸಹಿಸಬೇಕಲ್ಲವೇ? 

ಕೋಪ ನಿಮಗೆ ಬರುದಿಲ್ಲವೇ ?
ವಿಚಾರದಲಿ ಮತಬೇಧ ಸಹಜವಲ್ಲವೇ ?
ನಿಮ್ಮಲ್ಲಿ ಯಾವುದೇ ದೋಷಗಳಿಲ್ಲವೇ  ?

ನಿಮ್ಮ ಪ್ರತಿ ಮಾತಿಗೆ ನಾ ಒಪ್ಪೋಲ್ಲ
ನಿಮ್ಮದೇ ಕೇಳಬೇಕೆಂದು ಏನು ನಿಯಮವಿಲ್ಲ
ನನ್ನ ಮಾತೂ ನೀವು ಕೇಳಬೇಕಲ್ಲವೇ?

ನೀವು ತಿಳಿದಂತೆ ನಾನು ಇನ್ನೂ ಸಣ್ಣ ಬಾಲಕನಲ್ಲ 
ಹೌದು ,ಪ್ರಪಂಚದ ಕೆಲ ವ್ಯವಹಾರಗಳು ನನಗೆ ಇನ್ನೂ ತಿಳಿದಿಲ್ಲ
ಆದರೆ ನೀವು ನನಗೆ ಸಹಕರಿಸ ಬೇಕಲ್ಲವೇ ?

ನನ್ನನ್ನು ಸ್ವಲ್ಪ ಅರ್ಥ ಮಾಡಿ ಕೊಳ್ಳಿ
ನಾನು ಮಾಡುವ  ಕಾರ್ಯವನ್ನು ಸ್ವಲ್ಪ ನಂಬಿ
ನಿಮ್ಮ ಸಂತೋಷವೇ ನನ್ನ ಗುರಿ ಆಲ್ಲವೇ ?
by  ಹರೀಶ್ ಶೆಟಿ, ಶಿರ್ವ

2 comments:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...