Tuesday, September 6, 2011

ಸಮಯ

ಅವನಲ್ಲಿ ದೋಷ ಕಾಣುವುದೇ ?
ಅವನು ಗತದಲಿ
ಮಾಡಿದ
ಉಪಕಾರ
ನೆನಪಿಲ್ಲವೇ

ಹೂವು ತನ್ನ ಸುಗಂಧ ಬಿಡುವುದೇ?
ಅವನು ನೀಡಿದ
ಭರವಸೆಯ
ಸುಗಂಧದ ಪರಿಮಳ
ನೆನಪಿಲ್ಲವೇ

ಕಷ್ಟ ಸಮಯ ಇಷ್ಟು ಬೇಗ ಮರೆಯುವುದೇ ?
ನಮ್ಮ
ಕಷ್ಟದಲಿ ಸಹಾಯ ಮಾಡಿದ
ಆತನ
ಉದಾರ ಹೃದಯವನ್ನು
ಕೆಣಕುವುದೇ

ಒಳ್ಳೆ ಸಮಯ ಸದಾ ಉಳಿಯುವುದೇ ?
ಅವನ
ಒಳ್ಳೆ ಸಮಯದಲಿ
ನಮ್ಮ ದುಃಖವನ್ನು ಅಳಿಸಿ
ಸುಖ ಕೊಟ್ಟ
ಆ ಮಹಾನುಭಾವನಿಗೆ
ಕಷ್ಟ ಬಂದಾಗ
ನಾವು ಮುಖ ತಿರುಗಿಸುವುದೇ

ಉಪಕಾರ ಮಾಡಿದವರ ಋಣ ತೀರಿಸುವುದು ಬೇಡವೇ ?
ಉಪಕಾರ ಮಾಡಿದವರಿಗೆ
ಈ ತರಹ
ಅಪಕಾರ ಮಾಡುವುದು
ಸರಿಯೇ?

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...