Saturday, September 24, 2011

ಕಳ್ಳ ಕವಿ

ಭಾವನೆಗಳು ಕೇಳಿತು ಕವಿಯನ್ನು
"ನೀ ಕದಿಯುವೆ ಯಾವಾಗಲು ನನ್ನನ್ನು
ಮನಸ್ಸಲಿ ಸಾಕಿ ಬೆಳೆಸಿ ಚೆಲ್ಲುವೆ ಹಾಳೆಯಲಿ ಅದನ್ನು
ಹೇಳು ಏಕೆ ನೀ ಕದಿಯುವೆ ನನ್ನನ್ನು ?

ಕವಿ ಹೇಳಿದ ನಕ್ಕು
"ಎಲೈ ಮನಸ್ಸಲಿ ಹುಟ್ಟುವ  ಭಾವನೆಯೇ
ನಿನ್ನ ಜನ್ಮ ಆಗುವುದು ನನ್ನಿಂದಲೇ
ನೀನು ಬೆಳೆಯುವೆ ನನ್ನ ಮನಸ್ಸಲಿ
ನಿನ್ನನ್ನು ಹಾಳೆಯಲಿ ಸುಂದರವಾಗಿ ಬರೆದು
ಅನುಭವದ ಮಾತನ್ನು ಹಂಚುವೆ ಎಲ್ಲರಲ್ಲಿ
ಅದನ್ನು ಓದಿ ಜನರು ಆನಂದಿಸಲಿ , ನಗಲಿ, ಅಳಲಿ
ನನ್ನಿಂದ ತಿಳಿಯಲಿ ಜೀವನದ ಹಲವು ಸತ್ಯವನ್ನು
ನನ್ನಿಂದಲೂ ಜನರು ಪಡೆಯಲಿ ಕಿಂಚಿತ ಜ್ಞಾನವನ್ನು "
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...