Wednesday, September 28, 2011

ದ್ರೌಪದಿಯ ಯಾಚನೆ

ಕೃಷ್ಣ ಕೃಷ್ಣ
ಎಲ್ಲಿದೆ ನೀ ಕೃಷ್ಣ
ಕರೆಯುತ್ತಿದ್ದಾಳೆ ನಿನ್ನ ಗೆಳತಿ
ಬೇಗ ಬಾ ಕೃಷ್ಣ

ನೋಡು ನೋಡು
ದುಃಶಾಸನನ ದುಸ್ಸಾಹಸ
ತಂದಿದ್ದಾನೆ ಈ ಸಭಾಭವನಕ್ಕೆ
ಎಳೆದು ನನ್ನ ಕೂದಲ

ನೋಡು ನೋಡು
ಅಟ್ಟಹಾಸ ಹಾಕುತ್ತಿದ್ದ ದುರ್ಯೋಧನನನ್ನು
ಕಿರು ನಗೆಯಿಂದ ನೋಡುತ್ತಿದ್ದ
ಅವನ ಗೆಳೆಯ ಕರ್ಣನನ್ನು

ನೋಡು ನೋಡು
ಜೂಜಲ್ಲಿ ನನ್ನನ್ನು ಸೋತ
ಪಾಂಡವರ  ತಳಮಳ
ತಲೆ ತಗ್ಗಿಸಿ ಕೂತಿದ್ದಾರೆ ನಿಶ್ಚಲ

ನೋಡು ನೋಡು
ತುಟಿ ಹೊಲಿದು ಕುಳಿತ
ಕೌರವ ರಾಜ ಧೃತರಾಷ್ಟ್ರರ
ಪುತ್ರ ಮೋಹದ ಜಾಲ

ನೋಡು ನೋಡು
ಭೀಷ್ಮ ಪಿತಾಮಹರನ್ನು
ಅಧರ್ಮವನ್ನು ಅಲಕ್ಷಿಸಿ
ತಿಳಿಸುತ್ತಿದ್ದಾರೆ ಧರ್ಮದ ಬಲ

ನೋಡು ನೋಡು
ವಿಧುರರ ಮನಸ್ಥಿತಿ
ಅವರ ಮಾತು ನೀತಿಯನ್ನು
ಕೇಳುವವರಿಲ್ಲ ಈ ಸಭೆಯಲಿ

ನೋಡು ನೋಡು
ದುಃಶಾಸನ ದುಸ್ಸಾಹಸ
ನನ್ನ ಸೀರೆಯ ಎಳೆಯುತ್ತಿದ್ದಾನೆ
ನನ್ನನ್ನು ನಗ್ನ ಮಾಡಲು ಆತುರನಾಗಿದ್ದಾನೆ

ಮೂಕದರ್ಶಕರಾಗಿದ್ದಾರೆ ಎಲ್ಲರು
ನನ್ನ ಪ್ರಶ್ನೆಗೆ ಉತ್ತರ
ನೀಡುವವರು ಇಲ್ಲ ಯಾರೂ
ಬೇಗ ಬಾ ಕೃಷ್ಣ ನನ್ನನ್ನು ರಕ್ಷಿಸು ಕೃಷ್ಣ

ಕೃಷ್ಣ ಕೃಷ್ಣ
ಎಲ್ಲಿದೆ ನೀ ಕೃಷ್ಣ
ಕರೆಯುತ್ತಿದ್ದಾಳೆ ನಿನ್ನ ಗೆಳತಿ
ಬೇಗ ಬಾ ಕೃಷ್ಣ
ಬೇಗ ಬಾ ಕೃಷ್ಣ ನನ್ನನ್ನು ರಕ್ಷಿಸು ಕೃಷ್ಣ
by  ಹರೀಶ್ ಶೆಟ್ಟಿ , ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...