Tuesday, September 20, 2011

ಕಲ್ಲೊಂದು ಬಿದ್ದಿತು

ಕಲ್ಲೊಂದು ಬಿದ್ದಿತು
ನಾಲ್ಕು ರಸ್ತೆಯ ಮಧ್ಯದಲಿ

ಪುಟ್ಟ ಹುಡುಗನೊಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಅಲ್ಲಿ ಇಲ್ಲಿ ಎಸೆದು ಆಡಿಕೊಂಡ
ಆಡುತ ಆಡುತ ಕಾಲಿನಿಂದ ಮುಂದೂಡಿ
ನಲಿಯುತ ಕುಣಿಯುತ ಹೊರಟು ಹೋದ

ಭಕ್ತ ನೊಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಅದರಲ್ಲಿ ಅವನು ದೇವರನ್ನು ಕಂಡ
ಭಕ್ತಿ ಭಾವದಿಂದ ಅದನ್ನು ತೊಳೆದು ಪೂಜಿಸಿ
ತೃಪ್ತನಾಗಿ ಸಂತೋಷದಿಂದ ಹೊರಟು ಹೋದ

ಜ್ಞಾನಿ ಒಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಇದು ಬಹುಮೂಲ್ಯ ಕಲ್ಲೆಂದು ಕೊಂಡ
ಅದನ್ನು ಮೂಸಿ ನೋಡಿ ವಾಸನೆಯಿಂದ ಎಸೆದು
ನೊಂದು ಕೊಂಡು ಹೊರಟು ಹೋದ

ಮೂರ್ಖನೊಬ್ಬ ಬಂದ
ಕಲ್ಲ ಮುಂದೆ ನಿಂತ
ಕೈಯಲ್ಲಿ ಅದನ್ನು ಎತ್ತಿಕೊಂಡ
ಅದನ್ನು ಅವನು ಕತ್ತೆಯ ಕುತ್ತಿಗೆಗೆ ಕಟ್ಟಿ ಕೊಂಡ
ಅದರಲ್ಲಿ ಕುಳಿತು ಮೆರವಣಿಗೆಯಿಂದ
ನಗು ನಗುತ ಹೊರಟು ಹೋದ
by ಹರೀಶ್ ಶೆಟ್ಟಿ ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...