Monday, September 19, 2011

ಪ್ರಕೃತಿಯ ಕೋಪ

ಪ್ರಕೃತಿಯ ಕೋಪ
ಇದು ವಿನಾಶ ಸೂಚಕ
ಪ್ರವಾಹ, ಬರ, ಕ್ಷಾಮ,ಭೂಕಂಪ
ಕೋಪಿಸಿದರೆ ಇಲ್ಲ ಅನುಕಂಪ

ಪ್ರಕೃತಿ ನಮಗೆ ನೀಡುವಾಗ
ಆ ಕೊಡುಗೆಗೆ ನಮ್ಮಲ್ಲಿಲ್ಲ ಪಾತ್ರೆ ಆಗ
ಮಳೆಯಿಂದಾಯಿತು ನಮಗೆ ಉಪಕಾರ
ಸಾಧನೆ ಇಲ್ಲದೆ ಅದೂ ಕಸಿದುಕೊಂಡಿತು ನಮ್ಮ ಆಹಾರ

ಕಾಡಿನಲ್ಲಿ ಇಲ್ಲ ಮರಗಳು
ವಾಹನದ ವಿಷಪೂರಿತ ಹೊಗೆಗಳು
ಕಾರ್ಖಾನೆಯಿಂದ ನದಿಗೆ ಸೇರುವ ಕಸಗಳು
ಪರಮಾಣು ಪರೀಕ್ಷೆಯಿಂದ ಹೊರಡುವ ವಿಷಗಳು

ಮನುಷ್ಯನ ಸ್ವಾರ್ಥದ ಪರಿಣಾಮ
ಮಾನವನ ಮೂರ್ಖತನದಿಂದ ಆಗುತಿದೆ ಅಧರ್ಮ
ತಪ್ಪಿದೆ ಪ್ರಕೃತಿಯ ಸಂತುಲನ
ಹೆಚ್ಚಾಗುವ ಉಷ್ಣದಿಂದ ಏರುತಿದೆ ತಾಪಮಾನ

ಪ್ರಕೃತಿಯೇ ನಮ್ಮ ಜೀವನ
ಹಾಳು ಮಾಡಬೇಡಿ ಪರ್ಯಾವರಣ
ಕೆಡಿಸ ಬೇಡಿ ನಿಸರ್ಗದ ವಾತಾವರಣ 
ಪ್ರಕೃತಿಯನ್ನು ರಕ್ಷಿಸುವುದೇ ನಮ್ಮ ಧರ್ಮ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...