Sunday, September 25, 2011

ನನಗೆ ಸುಧಾಮನಾಗುವ ಇಚ್ಛೆ

ನನಗೆ ಸುಧಾಮನಾಗುವ ಇಚ್ಛೆ
ನನಗೆ ಬೇಡ ಕೃಷ್ಣನ ಪಟ್ಟ

ನನಗೆ ಬೇಡ ಮೊಸರು
ನನಗೆ ಬೇಡ ಹಾಲು
ನನಗಿಲ್ಲ ಇದನೆಲ್ಲ ತಿನ್ನುವ ಆಸೆ

ನನಗೆ ಬೇಡ ಅರಮನೆ
ನನಗೆ ಬೇಡ ವಜ್ರ ವೈಡೂರ್ಯ
ನನಗಿಲ್ಲ ಕಿರೀಟದ ಬಯಕೆ

ನನಗೆ ಬೇಡ ರಾಧೆ
ನನಗೆ ಬೇಡ ಸುಭದ್ರಾ ,ಸತ್ಯಭಾಮ
ನನಗಿಲ್ಲ ಪ್ರೀತಿಯ ಅಭಿಲಾಷೆ

ನನಗೆ ಬೇಕು ಕೃಷ್ಣನ ಮೈತ್ರಿ
ನನಗೆ ಬೇಕು ಕೃಷ್ಣನ ಭಕ್ತಿ
ನನಗೆ ಕೃಷ್ಣನ ದಾಸನಾಗುವ ಆಸೆ

ನನಗೆ ಸುಧಾಮನಾಗುವ ಇಚ್ಛೆ
ನನಗೆ ಬೇಡ ಕೃಷ್ಣನ ಪಟ್ಟ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...