Saturday, September 10, 2011

ಪೋಸ್ಟ್ ಮ್ಯಾನ್

ಕೇಳಿದೆ ನಾ ಪೋಸ್ಟ್ ಮ್ಯಾನ್ ನಿಗೆ
"ನಿನ್ನ ಉಪಕಾರ ಯಾರೂ ಮರೆಯಲಾರರು
ನಿನ್ನ ಕೆಲಸ ಯಾರೂ ಮಾಡಲಾರರು
ನಿನಗಾಗಿ ಜನರೆಲ್ಲಾ  ಕಾಯುತ್ತಿದ್ದರು
ನಿನ್ನನ್ನು ಮನೆಯ ಸದಸ್ಯನಂತೆ ಕಾಣುತ್ತಿದ್ದರು
ನೀನು ತಂದ ಪತ್ರವನ್ನು ಓದಿ ನಗುತ್ತಿದ್ದರು, ಅಳುತ್ತಿದ್ದರು
ಓದಲು ಬರದವರು ನಿನ್ನಿಂದ ಓದಿಸುತ್ತಿದ್ದರು 
ಸುಖ ದುಃಖವನ್ನು ಹಂಚುವ ನೀನು ಎಲ್ಲಿ ಕಣ್ಮರೆಯಾಗಿದೆ
ಈಗ ನಿನ್ನನ್ನು ಕಾಣುವುದೇ ಅಪರೂಪ ಆಗಿದೆ
ಏನು ಕಾರಣ ಇದರ ಹಿಂದೆ"

ಪೋಸ್ಟ್ ಮ್ಯಾನ್ ಹೇಳಿದ ನಕ್ಕು
"ಪ್ರಪಂಚದ ಗತಿ ವೇಗವಾಗಿದೆ
ನನ್ನ ಕಣ್ಮರೆಯಾಗುವುದಕ್ಕೆ ಇದೆ ಕಾರಣವಾಗಿದೆ
ಹೋಗಲಿ ಬಿಡು ಇದನೆಲ್ಲ
ಇದರಿಂದ ಕಲಿಯಲಿದೆ ಶಿಕ್ಷಣೆ ನಮಗೆಲ್ಲ
ಜೀವನದಲ್ಲಿ ಬದಲಾವಣೆ ಆಗುವುದು ಸಹಜ
ಕಾಲ ಬದಲಾದಂತೆ ಬದಲಾಗುತ್ತಾನೆ ಮನುಜ
ಆ ಸಮಯದ ಜನರಿಗೆ ಪತ್ರವೇ ಮಜಾ
ಈಗಿನ ಮಕ್ಕಳಿಗೆ ಪತ್ರ ಬರೆಯುದೆಂದರೆ ಆಗಿದೆ ಸಜಾ
ಸಮಯ ಬದಲಾಗಿದೆ
ಜನರಲ್ಲಿ ಸಮಯ ಇಲ್ಲದಾಗಿದೆ
ಮೊಬೈಲ್ , ಎಸ್ ಎಂ ಎಸ್ ಗಳ ಚಲನವಾಗಿದೆ
ಇಂಟರ್ನೆಟ್, ಇಮೇಲ್ ಗಳ ರಾಜ್ಯವಾಗಿದೆ
ಜನರು ಪತ್ರ ಬರೆಯುವುದೇ ಅಪರೂಪವಾಗಿದೆ"
by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...