Monday, September 12, 2011

ಹೊಸ ಪೀಳಿಗೆ

ನಾನು ಹೇಳಿದೆ  ಮನಸ್ಸಿಗೆ
ಸ್ವಲ್ಪ ವಿಚಾರ ಮಾಡು ಇನ್ನು
ಪ್ರಪಂಚ ಬದಲಾಗಿದೆ
ನೀನೂ ಬದಲಾಗು ಇನ್ನು

ಮರೆತು ಬಿಡು ಹಳೆ ರೂಡಿ ಪರಂಪರೆಯನ್ನು
ತೆರೆ ಮನಸ್ಸಿನ ಬಾಗಿಲನ್ನು
ನಮ್ಮ ಸಾಕಿದ  ಮಕ್ಕಳವರು
ಅವರ ಒಟ್ಟಿಗೆ ನಡೆ ಇನ್ನು 

ಹಿಂದೆ ಮುಂದೆ ನೋಡು ಸ್ವಲ್ಪ
ತೆರೆ ನಿನ್ನ ಕಣ್ಣು ಇನ್ನು
ನಮ್ಮ ಕರ್ತವ್ಯ ಮುಗಿದಿದೆ
ಹೊಸ ಪೀಳಿಗೆಯಲ್ಲಿ ಸೇರು ಇನ್ನು

ಪ್ರತಿ ಪೀಳಿಗೆ ವಿದ್ರೋಹಿ ಇರುತ್ತದೆ
ಜ್ಞಾಪಿಸಿಕೋ ನಿನ್ನ ಯುವ ವಯಸ್ಸನ್ನು
ಅವರ ರಕ್ತ ಕುದಿಯುವುದು ಸಹಜ
ಅವರ ಕೇಳುವ ಹಕ್ಕನ್ನು ಕೊಡು ಇನ್ನು

ವಿಚಾರದಲ್ಲಿ ಮತ ಬೇದ ಇರುವುದು ಸಹಜ
ಹೊಸ ಪೀಳಿಗೆಯವರೊಂದಿಗೆ ಜಗಳ ನಿಲ್ಲಿಸು ಇನ್ನು
ಜೀವನದ ಚಕ್ರ ಹೀಗೆಯೇ ತಿರುಗಲಿದೆ
ತಿಳಿದುಕೋ ಸೃಷ್ಟಿಯ ಈ ನಿಯಮವನ್ನು

ನಾನು ಹೇಳಿದೆ  ಮನಸ್ಸಿಗೆ
ಸ್ವಲ್ಪ ವಿಚಾರ ಮಾಡು ಇನ್ನು
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...