Friday, September 9, 2011

ವಾರ್ತಾ ದಿನ ಪತ್ರಿಕೆಯ ಜ್ಞಾನ

ಕೇಳಿದೆ ನಾ ವಾರ್ತಾ ದಿನ ಪತ್ರಿಕೆಗೆ
"ದಿನಾಲೂ ಮುಂಜಾನೆ ಜನರು ನಿನ್ನನ್ನು ಕಾಯುತ್ತಾರೆ
ನಿನ್ನನ್ನು ಓದಿ ದೇಶ ವಿದೇಶದ ಸುದ್ದಿಯನ್ನು ತಿಳಿಯುತ್ತಾರೆ 
ಆದರೆ ಸಂಜೆ ಆದಾಗಲೇ ನಿನ್ನನ್ನು ಅಲ್ಲಿ ಇಲ್ಲಿ ಬಿಸಾಕಿ ಬಿಡುತ್ತಾರೆ 
ನಂತರ ನಿನ್ನನ್ನು ಗುಜರಿ ಅಂಗಡಿಯಲ್ಲಿ ಮಾರಿ ಬಿಡುತ್ತಾರೆ
ನಿನಗಿಲ್ಲವೇ ಬೇಸರ ?
ಏನು ನಿನ್ನ ಅಪೇಕ್ಷೆ ?
ಏಕೆ ನಿನಗೆ ಈ ಶಿಕ್ಷೆ ?

ವಾರ್ತಾ ದಿನ ಪತ್ರಿಕೆ ಹೇಳಿತು ನಕ್ಕು
"ನನಗಿಲ್ಲ ಏನೂ ಅಪೇಕ್ಷೆ,
ಇದರಲ್ಲಿ ಎಂಥ ಶಿಕ್ಷೆ
ಯಾರೂ ಅಳಿಸಲಾರರು ನನ್ನಲ್ಲಿ ಮುದ್ರಿಸಿದ ಅಕ್ಷರವನ್ನ
ಯಾರೂ ಕೊಡಲಾರರು ನಾ ಕೊಡುವ ಜ್ಞಾನವನ್ನ
ಜನರು ಗುಜರಿ ಅಂಗಡಿಗೆ ಸೇರಿಸಿ ಬಿಡುತ್ತಾರೆ ನನ್ನನ್ನ
ಇದರಿಂದ ತಿಳಿದುಕೋ ನೀ ಒಂದು ಜ್ಞಾನದ ಮಾತನ್ನ
ಏನು ಮಾಡುವಿ ಪಡೆದು ರೂಪ ರಂಗ ಸೌಂದರ್ಯವನ್ನ
ಸೌಂದರ್ಯ ಯೌವನ ರಚಿಸದು ನಿನ್ನ ಜೀವನವನ್ನ   
ಈಗಲೇ ಕಾಪಾಡಿಕೋ ನಿನ್ನ ಅಂತ್ಯ ಸಮಯವನ್ನ
ನನ್ನಂತೆ ಮಾಡಿಕೋ ಸರಳ ನಿನ್ನ ಮನಸ್ಸನ್ನ
ಸುಖ ದುಃಖ ಜ್ಞಾನವನ್ನು ಹಂಚಿ ಪಡೆ ಸಂತೋಷವನ್ನ
ಮಾಡು ಸಾರ್ಥಕ ನಿನ್ನ ಜೀವನವನ್ನ"  
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...