Wednesday, September 7, 2011

ಬಾಂಬ್ ಸ್ಪೋಟ

ಇನ್ನೊಂದು ಬಾಂಬ್ ಸ್ಪೋಟ
ಮುಗಿಯಿತು ಇನ್ನೊಂದು ಸಂಸಾರದ ಆಟ

ಕಷ್ಟದಿಂದ ಕಲಿತು ವಕೀಲನಾದ ಅವನು
ತಂದೆ ತಾಯಿಯ ಆಶಿರ್ವಾದ ಪಡೆದ ಅವನು
ಪ್ರಥಮ ಕೇಸಿಗಾಗಿ ಹೊರಟ ಅವನು
ಹಾಯ್ ಕೋರ್ಟ್ ಗೆ ಕಾಲಿಟ್ಟ ಅವನು
ಜೀವನದ ಕೇಸೇ ಸೋತ ಅವನು

ಸಾಕಿ ಬೆಳೆಸಿದ ಮಗ ಇನ್ನೂ ಇಲ್ಲ
ತಂದೆ ತಾಯಿಯ ಕರುಳು ಇನ್ನಿಲ್ಲ
ಅವರ ದುಃಖಕ್ಕೆ ಮಿತಿ ಇಲ್ಲ
ಸಿಗುವ ಸರಕಾರದ ಹಣ ಬೇಕಿಲ್ಲ
ಅವರಿಗೆ ಅವರ ಮಗ ಬೇಕು ಬೇರೇನಿಲ್ಲ

ಜೀವನ ಒಂದು ಜೂಜಿನ ಆಟವಾಗಿದೆ
ಮನುಷ್ಯನ ಜೀವನಕ್ಕೆ ಮೌಲ್ಯವಿಲ್ಲದಾಗಿದೆ
ಅಲ್ಲಲ್ಲಿ ಬಿದ್ದು ಸಾಯುವವರ ಸಂಖ್ಯ ಹೆಚ್ಚಾಗಿದೆ
ಭ್ರಷ್ಟಾಚಾರದ ಹಾಸಿಗೆಯಲಿ ಸರಕಾರ ಮಲಗಿದೆ
ಪೋಲೀಸರ ಕೆಲಸ ಲಂಚದ ಹೊಟ್ಟೆಯ ಪಾಲಾಗಿದೆ
by  ಹರೀಶ್ ಶೆಟ್ಟಿ . ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...