Monday, September 5, 2011

ಗುರುಗಳ ಉಪಕಾರ

ನಂಬಿದೆ ನಾ ನನ್ನ ಗುರುಗಳನ್ನ
ಅನುಸರಿಸಿದೆ ಅವರು ಕೊಟ್ಟ ಶಿಕ್ಷಣೆಗಳನ್ನ
ತಿಳಿಸಿದರು ಸತ್ಯ ಸುಳ್ಳಿನ ಭೇದವನ್ನ
ತೋರಿಸಿದರು ಸುಕರ್ಮದ ಹಾದಿಯನ್ನ
ತಿದ್ದಿದರು ನಾ ಮಾಡಿದ ತಪ್ಪನ್ನ

ಗುರುಗಳ ರೂಪದಲ್ಲಿ ಕಂಡೆ ನಾ ತಾಯಿಯನ್ನ
ಗುರುಕುಲದಲ್ಲಿ ಕಂಡೆ ನಾ ನನ್ನ ಮನೆಯನ್ನ
ಮರೆಯಲಾರೆ ಜ್ಞಾನ ಕೊಟ್ಟ ಆ ದೇವರನ್ನ

ನೆನಪಿಸುವೆ ಅವರು ಕೊಟ್ಟ ಪೆಟ್ಟಿನ ಪ್ರಸಾದವನ್ನ
ನುಡಿಯುವೆ ಅವರು ನುಡಿದ ಮಾತನ್ನ
ಪಾಲಿಸುವೆ ಅವರು ಕೊಟ್ಟ ವಿದ್ಯದಾನವನ್ನ

ಶಿಲ್ಪಿಯಾಗಿ ರಚಿಸಿದರು ನನ್ನ ಜೀವನವನ್ನ
ತೋರಿಸಿ ಕೊಟ್ಟರು ಕೇವಲ ಸತ್ಯದ ಮಾರ್ಗವನ್ನ
ನೆನೆಯುವೆ ಸದಾ ನಿಮ್ಮ ಉಪಕಾರವನ್ನ
ಸ್ವೀಕರಿಸಿ ಗುರುಗಳೇ ನನ್ನ  ಕೋಟಿ ಕೋಟಿ ನಮನವನ್ನ
ಹೇಗೆ ತೀರಿಸಲಿ ನೀವು ಮಾಡಿದ ತ್ಯಾಗದ ಗುರುದಕ್ಷಿಣೆಯನ್ನ
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...