Sunday, September 4, 2011

ದೇವರ ಮಕ್ಕಳು

ಅವಳು ಅವಳ ಯೌವನದಲ್ಲಿದ್ದಳು
ಬಾಲಕಿಯಿಂದ ಹೆಣ್ಣಾದಳು 
ಸುಂದರ ರೂಪ ,ಉದ್ದ ಕೇಶ ,ಅದ್ಭುತ ಕಂಗಳು

ಆದರೆ ಅವಳು ಈಗಲೂ ಪುಟ್ಟ ಮಕ್ಕಳಂತೆ
ಬುದ್ದಿ ಬೆಳೆಯದೆ ಅವಳೊಂದು ಮಗುವಿನಂತೆ
ಅವಳಿಗಿಲ್ಲ ಯಾವುದೇ ಭಯ ,ಚಿಂತೆ

ಸದಾ ಅವಳ ತುಟಿಯಲ್ಲಿ ಮುಗ್ದ ನಗೆ
ಅವಳೆಂದರೆ ತುಂಬಾ ಇಷ್ಟ ನನಗೆ
ಅವಳಿಗೂ ತುಂಬಾ ಪ್ರೀತಿ ನನ್ನ ಬಗೆ

ಅವಳಿಗಿಷ್ಟ ನನ್ನನ್ನು ನೋಡಿ ಕೀಟಲೆ ಮಾಡುವುದು
ಜೋರಾಗಿ ಕೂಗಿ ಕರೆಯುವುದು
ಚಪ್ಪಾಳೆ ತಟ್ಟಿ ಕಿಲಕಿಲನೆ ನಗುವುದು

ನನ್ನ ಹೃದಯ ಅಳುತ್ತಿತ್ತು ನೋಡಿ ಅವಳನ್ನು
ನೋವಾಗುತ್ತಿತ್ತು ಕಂಡು ಅವಳ ಮುಗ್ದತೆಯನ್ನು 
ಜೀವನ ಕಳೆಯುತ್ತಿದ್ದಳು ಅವಳು ಮರೆತು ಜೀವನವನ್ನು

ಅವಳ ತಂದೆ ತಾಯಿಯವರು ಅವಳ ಬಾಳಿನ ದೇವರು
ಅವಳಿಗಾಗಿಯೇ ಜೀವಿಸುತ್ತಿದ್ದರು ಅವರಿಬ್ಬರೂ
ಮಮತೆ, ವಾತ್ಸಲ್ಯದಿಂದ ಅವಳನ್ನು ಸಾಕುತ್ತಿದ್ದರು

ಇವಳಂತ ಮಕ್ಕಳಿಗೆ  ಕನಸ್ಸಿಲ್ಲವೇ ?
ಇವಳಂತ ಮಕ್ಕಳಿಗೆ ಮನಸ್ಸಿಲ್ಲವೇ?
ಇವಳಂತ ಮಕ್ಕಳಿಗೆ ಯಾಕೆ ಈ ಶಿಕ್ಷೆ ?

ನನ್ನ ದೇವರಲ್ಲಿ ಒಂದೇ ಬೇಡಿಕೆ
ಕೊಡ ಬೇಡ ಇಂತಃ ಕಷ್ಟ ಯಾರಿಗೂ 
ಬುದ್ದಿ, ವಿಧ್ಯಾ ಕೊಟ್ಟು ಕಾಪಾಡು ಎಲ್ಲಾ ಮಕ್ಕಳಿಗೂ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...