Friday, September 2, 2011

ವಿಧವೆ

ಬಿಟ್ಟು ಹೋದ ಜೀವನದಲ್ಲಿ ಕತ್ತಲೆಯನ್ನು
ಕುಂಕುಮವ ಒರಸಿ ಬತ್ತಲೆ ಹಣೆಯನ್ನು
ಎಲ್ಲ ಬಣ್ಣವ ಕಸಿದು ಬಣ್ಣರಹಿತ ಶ್ವೇತವನ್ನು

ಕಣ್ಣಿರಿಲ್ಲದೆ ಬತ್ತಿ ಹೋದ ಕಂಗಳನ್ನು
ತುಂಡು ತುಂಡಾಗಿ ಅಳುತ್ತಿದ್ದ ಬಳೆಗಳನ್ನು
ಕೊನೆ ಉಸಿರೆಳೆದು ಮುರಿಯುವ ಕನಸನ್ನು

ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂಬಂಧಿಕರನ್ನು
ಸಾಂತ್ವನ ಕೊಟ್ಟು ಮರೆಯಾಗುವ ಗೆಳೆಯರನ್ನು
ದೂರ ಸರಿಸಿ ತನ್ನ ಪಾಡಿಗೆ ಹೋಗುವ ಜನರನ್ನು

ಈಗ ನಾನು ಏಕಾಂಕಿ
ಕಾಣದಾಗಿದೆ ಜೀವನದ ಹಾದಿ
ಹೇಳಲಿಕ್ಕೆ ಜಗವೆಲ್ಲ ನಮ್ಮವೇ
ಸಾಗಿಸುತ್ತಿದ್ದೇನೆ  ಜೀವನ ಒಬ್ಬಳೇ
ದುಷ್ಟ ಸಭ್ಯ ಜನರಿಂದ ಕಾಪಾಡುತ್ತಿದ್ದೇನೆ ನನ್ನ ಮಾನ 
ಬೆತ್ತಲೆ  ಸಮಾಜದಲ್ಲಿ ನನ್ನಂತ ವಿಧವೆಗೆ ಇಲ್ಲ ಸ್ಥಾನ  
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...