Wednesday, August 3, 2011

ತಾವರೆಯ ಗುಣ

ಕೇಳಿದೆ ನಾ  ತಾವರೆಯ  ಹೂವಿಗೆ ,
"ಎಂಥ ನಿನ್ನ ಅಂದ ,
ಎಂಥ ನಿನ್ನ ಚೆಂದ ,
ಆದರೆ ಇರುವುದು
ಏಕೆ ನೀ ಈ ಕೆಸರಲ್ಲಿ
ಏಕೆ  ನಿನಗೆ ಇದು ಅನುಬಂಧ ?"
ತಾವರೆ ಹೂ ಹೇಳಿತು ನಕ್ಕು
" ನನ್ನ ಅಂದ ಚೆಂದ
ಅಲ್ಲ ನನ್ನ ಗುಣ,
ಕೆಸರಿನಲ್ಲಿದ್ದರು
ನನ್ನಲ್ಲಿ ಇಲ್ಲ ಅವಗುಣ
ಬಾಳುವೆ ನಾ ಇಲ್ಲಿ ಸುಖದಿಂದ
"ಕಷ್ಟದಲ್ಲೂ ಸುಖದಿಂದ ಇರಬಹುದು
ಕೊಳಕಲ್ಲೂ  ಸೌಂದರ್ಯ ಹುಟ್ಟಬಹುದು"
ಇದೇ ಸಂದೇಶ ನಿಮೆಗೆಲ್ಲರಿಗೂ ನನ್ನಿಂದ .
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...