Saturday, August 13, 2011

ಸಮುದ್ರದ ವಿಚಾರ

ಕೇಳಿದೆ ನಾ ಸಮುದ್ರಕ್ಕೆ
"ನೀನು ಇಷ್ಟು ವಿಶಾಲ 
ನಿನ್ನಲ್ಲಿ ತುಂಬಿದೆ
ಧನ ಸಂಪತ್ತು ಅಪಾರ,
ಆದರೂ ಕೆಲವು ಜನರು 
ನಿನ್ನಿಂದ ಪಡೆಯುತ್ತಾರೆ ಮುತ್ತುಗಳನ್ನು  ,
ಕೆಲವರು ಪಡೆಯುತ್ತಾರೆ ಮೀನುಗಳನ್ನು  
ಹಾಗು ಕೆಲವರು ಖಾಲಿ ಕೈ
ಒದ್ದೆ ಮಾಡಿ ಬರುತ್ತಾರೆ ಕಾಲನ್ನು,
ಏನು ನಿನ್ನ ವಿಚಾರ"
ಸಮುದ್ರ ಹೇಳಿತು ನಕ್ಕು
"ಹೌದು ನಾನು ಮಹಾ ಸಾಗರ
ಕೇಳು ನನ್ನ ವಿಚಾರ
"ನನ್ನಲ್ಲಿ ಹುಡುಕುತ್ತಾರೋ
ಯಾರು ಯಾವ ವಸ್ತು
ಕಷ್ಟಪಟ್ಟು ಪ್ರಯತ್ನಿಸುತ್ತಾರೋ
ಪಡೆಯುತ್ತಾರೆ ಅವರು ಅದೇ ವಸ್ತು"
ಜೀವನದಲ್ಲಿ ನೀ ಮಾಡು ನಿರ್ಧಾರ
ಹೋಗು ಮನಸ್ಸಿನ ದ್ವಾರ 
ಕಷ್ಟಪಟ್ಟು  ಪ್ರಯತ್ನಿಸಿ ಗಳಿಸು 
ವಸ್ತು ಮನ ಪ್ರಕಾರ"
by ಹರೀಶ್ ಶೆಟ್ಟಿ ,ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...