Thursday, August 18, 2011

ನಾನೂ ಅಣ್ಣ, ನೀನೂ ಅಣ್ಣ

ನಾನೂ ಅಣ್ಣ,  ನೀನೂ ಅಣ್ಣ
ಬನ್ನಿ ಬದಲಾಯಿಸುವ ದೇಶದ ಬಣ್ಣ

ನಮ್ಮ ಒಂದೇ ವಿಚಾರ
ಬೇಡ ಭ್ರಷ್ಟಾಚಾರ
ಬೇಕು ನ್ಯಾಯ
ನಡೆಯಲಾರದು ಅನ್ಯಾಯ

ಇದು ಜನ ಆಂದೋಲನ
ಕಿತ್ತು ಹಾಕುವ ಭ್ರಷ್ಟ ಸರಕಾರವನ್ನ
ಬೇಡ ಭ್ರಷ್ಟ ಆಡಳಿತದ ದುಷ್ಟ ಕರ್ತುತ್ವ
ಜನರ  ಮತದ ಇರಲಿ ಮಹತ್ವ

ಜನ ಜನರ ಹೋರಾಟ
ನಿಲ್ಲಲ್ಲಿ ಆಡಳಿತ ಪಕ್ಷದ ಆಟ
ನೋಡಲಿ ಜನ ಶಕ್ತಿಯ ಕೌಶಲ್ಯ
ತಿಳಿಯಲಿ ಜನರು ಕೊಟ್ಟ  ಮತದ  ಮೌಲ್ಯ

ತರುವ ಹೊಸ ಕ್ರಾಂತಿ
ನೆಲೆಸಲಿ ದೇಶದಲ್ಲಿ ಶಾಂತಿ
ಪಾಸಾಗಲಿ ಜನ ಲೋಕಪಾಲ
ಹೋಗಲಿ ಆ ಭ್ರಷ್ಟ ಕಾಲ

ನಾನೂ ಅಣ್ಣ ನೀನೂ ಅಣ್ಣ
ಬನ್ನಿ ಬದಲಾಯಿಸುವ ದೇಶದ ಬಣ್ಣ
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...