Monday, August 8, 2011

ಕೊಳಲಿನ ಮಧುರ ಸ್ವರ

ಕೇಳಿದೆ  ನಾ ಕೊಳಲಿಗೆ
"ನಿನ್ನ ಮೈಯಲ್ಲಿ  ಎಷ್ಟು ತೂತುಗಳು ,
ಒಳಗಿನಿಂದ  ನೀ  ಖಾಲಿ
ಆದರೆ ನಿನ್ನನ್ನು ಊದಿದರೆ
ನೀ ಮಧುರ ಸ್ವರ ನುಡಿಯುವಿ
ಇದು ಹೇಗೆ ಕೊಳಲು"
ಕೊಳಲು ಹೇಳಿತು ನಕ್ಕು
"ನನ್ನ ಶರೀರದ ತೂತು 
ನನ್ನ ಜೀವನದ  ಗುರುತು
ಒಳಗಿನ ಖಾಲಿತನದಲ್ಲಿ
ಅಡಗಿದೆ ಒಂದು ಮಾತು
"ನಿಮ್ಮ ಒಳಗೆ ನಿಮಗೆ
ಕಾಣದ ಗುಣಗಳು ತುಂಬಿದೆ,  
ನಿರಾಶೆಯ ತೂತುಗಳನ್ನು
ಹಾಗು ಖಾಲಿತನವನ್ನು 
ದೈರ್ಯದಿಂದ ಹಾಗು
ಎಚ್ಚರಿಕೆಯಿಂದ ಮುಚ್ಚಿದರೆ,
ನಿಮ್ಮ ಎಲ್ಲ ಗುಣಗಳನ್ನು
ನನ್ನ ಮಧುರ ಸ್ವರಗಳಂತೆ
ಹೊರ ತರಬಹುದು"
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...