Sunday, August 7, 2011

ಕೊಡೆಯ ಮಾಯೆ

ಕೇಳಿದೆ ನಾ ಕೊಡೆಯ
"ನೀನು ಇಷ್ಟು ಚಿಕ್ಕ
ಕೀರ್ತಿ ನಿನ್ನ ದೊಡ್ಡದು
ಮಳೆಯಿಂದ ರಕ್ಷಿಸುವೆ
ಬಿಸಿಲಲ್ಲಿ ನೀಡುವೆ ಛಾಯೆ
ಎಂಥ ನಿನ್ನ ಮಾಯೆ "
ಕೊಡೆ ಹೇಳಿತು ನಕ್ಕು
"ನನ್ನದಿಲ್ಲ ಏನು ಮಾಯೆ
ನನ್ನನ್ನು ಮಾಡಿದವ ಜಾಣ
ನಿಮಗೆ ಒಂದು ಜ್ಞಾನ
ಕಷ್ಟ ಇರಲಿ ಎಷ್ಟೇ ದೊಡ್ಡ
ಸಿಕ್ಕ ಚಿಕ್ಕ ಸಹಾಯವೇ  ಮುಖ್ಯ,
ದೊಡ್ಡ ಕಷ್ಟವನ್ನು 
ಪಾರು ಮಾಡುವುದು
ಚಿಕ್ಕ ಸಹಾಯದಿಂದಲೂ ಶಕ್ಯ" 
ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...