Sunday, August 21, 2011

ವಿರಹ

ಎಲ್ಲಿದ್ದಿ  ನೀ "ಕೃಷ್ಣ "
ಕಾದು ಕಾದು ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"

ನೀನು ಕನಸಲಿ "ಕೃಷ್ಣ "
ನೀನು ಮನಸಲಿ "ಕೃಷ್ಣ "
ನೀನು ತನು ಮನದಲಿ "ಕೃಷ್ಣ "
ಎಲ್ಲೆಡೆ ನೀನೇ ನೀನು "ಕೃಷ್ಣ "

ನಿನ್ನ ವಿನಃ ನಾ ಬದುಕಲಾರೆ  "ಕೃಷ್ಣ "
ನೀನಲ್ಲದೆ ನಾನು ಉಸಿರಾಡಲಾರೆ "ಕೃಷ್ಣ "
ಏಕಾಂತ ಜೀವನ ಕಳೆಯಲಾರೆ "ಕೃಷ್ಣ "
ವಿರಹದ ಕಷ್ಟ ಸಹಿಸಲಾರೆ "ಕೃಷ್ಣ "

ಹೃದಯ ನೋವಿನಿಂದ ಅಳುತ್ತಿದೆ "ಕೃಷ್ಣ "
ನೀನಿಲ್ಲದೆ ಎಲ್ಲ ಆಸೆ ಸೋತಿದೆ "ಕೃಷ್ಣ "
ನಿದ್ರೆ ನನ್ನನ್ನು ಮರೆತಿದೆ  "ಕೃಷ್ಣ "
ಏಕೆ ನಾ ಬದುಕುವೆ "ಕೃಷ್ಣ "

ಎಲ್ಲಿದ್ದಿ ನೀ "ಕೃಷ್ಣ "
ಕಾದು  ಕಾದು  ಸೋತು ಹೋದೆ "ಕೃಷ್ಣ "
ನಿನ್ನ ರಾಧೆ ಬದುಕಲಾರಳು "ಕೃಷ್ಣ "
ಬೇಗ ಬಾ "ಕೃಷ್ಣ"
by ಹರೀಶ್ ಶೆಟ್ಟಿ ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...